alex Certify ದುಷ್ಟಶಕ್ತಿ ಎದುರು ಸತ್ಯದ ಜಯ: ನವರಾತ್ರಿ ಶುಭಕೋರುವ ನೆಪದಲ್ಲಿ ವಿಪಕ್ಷಗಳಿಗೆ ಜಾಹೀರಾತು ಮೂಲಕ ಟಾಂಗ್ ನೀಡಿದ ಸರ್ಕಾರ: ಬಿಜೆಪಿಯಿಂದಲೂ ತಿರುಗೇಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದುಷ್ಟಶಕ್ತಿ ಎದುರು ಸತ್ಯದ ಜಯ: ನವರಾತ್ರಿ ಶುಭಕೋರುವ ನೆಪದಲ್ಲಿ ವಿಪಕ್ಷಗಳಿಗೆ ಜಾಹೀರಾತು ಮೂಲಕ ಟಾಂಗ್ ನೀಡಿದ ಸರ್ಕಾರ: ಬಿಜೆಪಿಯಿಂದಲೂ ತಿರುಗೇಟು

ಬೆಂಗಳೂರು: ದುಷ್ಟಶಕ್ತಿ ಎದುರು ಸತ್ಯದ ಜಯ ಎನ್ನುವ ಮೂಲಕ ನವರತರಿ ಶುಭಕೋರುವ ನೆಪದಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರ ವಿಪಕ್ಷಗಳಿಗೆ ಜಾಹೀರಾತಿನ ಮೂಲಕ ಟಾಂಗ್ ನೀಡಿದೆ. ಇದಕ್ಕೆ ರಾಜ್ಯ ಬಿಜೆಪಿ ಘಟಕವೂ ತಿರುಗೇಟು ನೀಡಿದೆ.

ನವರಾತ್ರಿ ಎಂಬುದಕ್ಕೆ ಹಿಂದೂ ಧರ್ಮದಲ್ಲಿ ಪೌರಾಣಿಕ ಮಹತ್ವವಿದೆ. ದುರ್ಗೆಯ ನವ ಅವತಾರಗಳನ್ನು ಆರಾಧಿಸುವ ಈ ಹಬ್ಬವನ್ನು ಭ್ರಷ್ಟ ಮುಖ್ಯಮಂತ್ರಿ, ಮುಡಾ ಹಗರಣದ ಎ1 ಆರೋಪಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯಕ್ಕಾಗಿ ಬಳಸಿಕೊಂಡಿರುವುದು ಅಕ್ಷಮ್ಯ ಎಂದು ಕಿಡಿಕಾರಿದೆ.

ಆರೋಪಿ ಸಿದ್ದರಾಮಯ್ಯ ಅವರೇ, ಈ ರೀತಿ ಜಾಹೀರಾತು ನೀಡುವುದರಿಂದ ನೀವು ಮಾಡಿರುವ ಪಾಪಕರ್ಮ, ಭ್ರಷ್ಟಾಚಾರಗಳು ಪರಿಹಾರವಾಗುವುದಿಲ್ಲ. ರಾಮ ಸತ್ಯನೇ, ಆದರೆ ಸಿದ್ದರಾಮಯ್ಯ ಬ್ರಹ್ಮಾಂಡ ಸುಳ್ಳು. ಶ್ರೀರಾಮ ಸತ್ಯ ಅನ್ವೇಷಣೆಗಾಗಿ ಸೀತೆಯಿಂದ ದೂರವಾಗಿ ಸತ್ಯಶೋಧನೆ ನಡೆಸಿದ್ದ. ಅದೇ ಮಾರ್ಗದಲ್ಲಿ ನೀವು ನಡೆಯುವುದಾದರೆ ಸಿಎಂ ಪದವಿಗೆ ರಾಜೀನಾಮೆ ಸಲ್ಲಿಸಿ ಸತ್ಯಶೋಧನೆಗೆ ಅವಕಾಶ ನೀಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...