alex Certify ಲೆಜೆಂಡ್ಸ್ ಎಂದಿಗೂ ಸಾಯುವುದಿಲ್ಲ: ರತನ್ ಟಾಟಾ ನಿಧನಕ್ಕೆ ಕಂಬನಿ ಮಿಡಿದ ಆನಂದ್ ಮಹೀಂದ್ರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೆಜೆಂಡ್ಸ್ ಎಂದಿಗೂ ಸಾಯುವುದಿಲ್ಲ: ರತನ್ ಟಾಟಾ ನಿಧನಕ್ಕೆ ಕಂಬನಿ ಮಿಡಿದ ಆನಂದ್ ಮಹೀಂದ್ರಾ

ರತನ್ ಟಾಟಾ ಅವರ ನಿಧನಕ್ಕೆ ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರಾ ಸಂತಾಪ ವ್ಯಕ್ತಪಡಿಸಿದ್ದು, ರತನ್ ಟಾಟಾ ಅವರ ಅನುಪಸ್ಥಿತಿಯನ್ನು ಒಪ್ಪಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಭಾರತದ ಆರ್ಥಿಕತೆಯು ಐತಿಹಾಸಿಕ ಪ್ರಗತಿಯ ತುದಿಯಲ್ಲಿ ನಿಂತಿದೆ. ರತನ್ ಟಾಟಾ ಅವರ ಜೀವನ ಮತ್ತು ಕೆಲಸ ನಾವು ಈ ಸ್ಥಾನದಲ್ಲಿರುವುದಕ್ಕೆ ಹೆಚ್ಚಿನ ಸಂಬಂಧವನ್ನು ಹೊಂದಿದೆ. ಆದ್ದರಿಂದ, ಅವರ ಮಾರ್ಗದರ್ಶನ ಈ ಸಮಯದಲ್ಲಿ ಅತ್ಯಮೂಲ್ಯವಾಗಿರುತ್ತಿತ್ತು. ಏಕೆಂದರೆ ಅವರ ಸಲಹೆ, ಮಾರ್ಗದರ್ಶನ, ಉದಾಹರಣೆಯನ್ನು ಅನುಕರಿಸಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.

ಆರ್ಥಿಕ ಸಂಪತ್ತು ಮತ್ತು ಯಶಸ್ಸನ್ನು ಸೇವೆಗೆ ಬಳಸಿದಾಗ ಹೆಚ್ಚು ಉಪಯುಕ್ತವಾಗುತ್ತದೆ. ಗುಡ್ ಬೈ. ಮಿಸ್ಟರ್ ಟಾಟಾ, ನೀವೆಂದಿಗೂ ಮರೆಯಾಗುವುದಿಲ್ಲ. ಏಕೆಂದರೆ ಲೆಜೆಂಡ್ಸ್ ಎಂದಿಗೂ ಸಾಯುವುದಿಲ್ಲ …ಓಂ ಶಾಂತಿ ಎಂದು ಆನಂದ್ ಮಹಿಂದ್ರಾ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...