alex Certify ಅರಮನೆಯಿಂದ ಏಕಾಏಕಿ ರಸ್ತೆಗೆ ನುಗ್ದಿದ ದಸರಾ ಆನೆಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರಮನೆಯಿಂದ ಏಕಾಏಕಿ ರಸ್ತೆಗೆ ನುಗ್ದಿದ ದಸರಾ ಆನೆಗಳು

ಮೈಸೂರು: ನಿನ್ನೆ ರಾತ್ರಿ ಮೈಸೂರು ಅರಮನೆಯಿಂದ ದಸರಾ ಆನೆಗಳು ಏಕಾಏಕಿ ಹೊರಗೆ ಓಡಿ ಬಂದು ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.

ಅರಮನೆಯ ಮುಖ್ಯ ದ್ವಾರದಿಂದ ಧನಂಜಯ ಆನೆ ಕಂಜನ್ ಆನೆಯನ್ನು ಓಡಿಸಿಕೊಂಡು ಬಂದಿದೆ. ಅರಮನೆಯಲ್ಲಿ ಊಟದ ವೇಲೆ ಧನಂಜಯ ಮತ್ತು ಕಂಜನ್ ಆನೆ ನಡುವೆ ಗಲಾಟೆಯಾಗಿದ್ದು, ಕಂಜನ್ ಆನೆಯನ್ನು ಧನಂಜಯ ಆನೆ ಓಡಿಸಿಕೊಂಡು ಬಂದಿದೆ.

ಏಕಾಏಕಿ ಅರಮನೆಯಿಂದ ರಸ್ತೆಗೆ ಕಂಜನ್ ಆನೆ ಓಡಿಬಂದಿದೆ. ಧನಂಜಯ ಆನೆ ಅದನ್ನು ಅಟ್ಟಿಸಿಕೊಂಡು ಬಂದಿದೆ. ಅರಮನೆಯಿಂದ ಆನೆಗಳು ಹೊರಗೆ ಓಡಿ ಬರುವುದನ್ನು ಗಮನಿಸಿದ ವಾಹನ ಸವಾರರು, ಜನ ಚೆಲ್ಲಾಪಿಲ್ಲಿಯಾಗಿದ್ದಾರೆ. ಆದರೆ ಹೆಚ್ಚಿನ ಸಂಖ್ಯೆಯ ಜನರು ಇರಲಿಲ್ಲ. ಕೂಡಲೇ ಮಾವುತರು ಕಾರ್ಯಾಚರಣೆ ನಡೆಸಿ ಆನೆಗಳನ್ನು ನಿಯಂತ್ರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...