KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಲೋಕಸಭೆ ಚುನಾವಣೆಯಲ್ಲಿ ಮತ ಹಾಕದಿದ್ದರೆ ಬ್ಯಾಂಕ್ ಖಾತೆಯಿಂದ 350 ರೂ. ಕಡಿತ ? ಇಲ್ಲಿದೆ ವದಂತಿ ಹಿಂದಿನ ಅಸಲಿ ಸತ್ಯ….!

Published September 16, 2023 at 12:35 pm
Share
SHARE

ಮುಂದಿನ ವರ್ಷ ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ರಾಜಕೀಯ ಪಕ್ಷಗಳು ಈಗಾಗಲೇ ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿವೆ. ಚುನಾವಣೆಯಲ್ಲಿ ಮತದಾನದ ಕುರಿತಂತೆ ಶಾಕಿಂಗ್‌ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡದಿದ್ದರೆ ಮತದಾರರ ಬ್ಯಾಂಕ್ ಖಾತೆಯಿಂದ 350 ರೂಪಾಯಿ ಕಡಿತಗೊಳಿಸಲಾಗುವುದು ಎಂದು ಈ ವೈರಲ್‌ ಸುದ್ದಿಯಲ್ಲಿ ಹೇಳಲಾಗಿದೆ.

ಆದರೆ ಈ ಮಾಹಿತಿ ಸಂಪೂರ್ಣ ಸುಳ್ಳು. ಕೇಂದ್ರ ಸರ್ಕಾರದ ಸತ್ಯ ತಪಾಸಣೆ ಘಟಕವಾದ ಪಿಐಬಿ ಫ್ಯಾಕ್ಟ್ ಚೆಕ್ ಇದನ್ನು ಸ್ಪಷ್ಟಪಡಿಸಿದೆ. ವೈರಲ್‌ ಆಗಿರೋ ಪತ್ರಿಕೆಯ ತುಣುಕು ಹೋಳಿ ಸಂದರ್ಭದಲ್ಲಿ ಪ್ರಕಟವಾದ ಒಂದು ತಮಾಷೆಯ ಸುದ್ದಿಯಾಗಿದೆ. ಆದರೆ ಜನರು ಈ ಸುದ್ದಿಯನ್ನು ನಿಜವೆಂದು ಸ್ವೀಕರಿಸಲು ಪ್ರಾರಂಭಿಸಿದರು. ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್‌ ಮಾಡಿದ್ದಾರೆ.

ವೈರಲ್ ಫೇಕ್ ನ್ಯೂಸ್‌ನಲ್ಲಿ ಹೇಳಿದ್ದೇನು ?

ಮತದಾನ ಮಾಡದವರನ್ನು ಆಧಾರ್ ಕಾರ್ಡ್ ಮೂಲಕ ಗುರುತಿಸಲಾಗುತ್ತದೆ ಮತ್ತು ಆ ಕಾರ್ಡ್‌ಗೆ ಲಿಂಕ್ ಮಾಡಿದ ಅವರ ಬ್ಯಾಂಕ್ ಖಾತೆಯಿಂದ 350 ರೂಪಾಯಿಗಳನ್ನು ಕಡಿತಗೊಳಿಸಲಾಗುತ್ತದೆ ಎಂದು ವೈರಲ್‌ ನ್ಯೂಸ್‌ನಲ್ಲಿ ತಪ್ಪು ಮಾಹಿತಿ ನೀಡಲಾಗಿದೆ.

ಬ್ಯಾಂಕ್ ಖಾತೆಯಲ್ಲಿ 350 ರೂಪಾಯಿ ಇಲ್ಲದಿದ್ದರೆ ಅಥವಾ ಬ್ಯಾಂಕ್ ಖಾತೆಯೇ ಇಲ್ಲದ ಮತದಾರರು ತಮ್ಮ ಮೊಬೈಲ್ ಫೋನ್ ರೀಚಾರ್ಜ್ ಸಮಯದಲ್ಲಿ ಈ ಹಣವನ್ನು ಕಡಿತಗೊಳಿಸಲಾಗುವುದು ಎಂದು ನಕಲಿ ಸುದ್ದಿಯಲ್ಲಿ ಹೇಳಲಾಗಿದೆ. ಇದಕ್ಕಾಗಿ ಕನಿಷ್ಠ 350 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಮತ್ತು ಇದಕ್ಕಿಂತ ಕಡಿಮೆ ರೀಚಾರ್ಜ್‌ಗೆ ಅವಕಾಶವಿರುವುದಿಲ್ಲ. ಆಯೋಗವು ಈಗಾಗಲೇ ನ್ಯಾಯಾಲಯದಿಂದ ಅನುಮತಿ ಪಡೆದಿರುವುದರಿಂದ ಆಯೋಗದ ನಿರ್ಧಾರದ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂದೆಲ್ಲ ಫೇಕ್‌ ನ್ಯೂಸ್‌ನಲ್ಲಿ ಬರೆಯಲಾಗಿತ್ತು.

ಈ ಸುದ್ದಿಯನ್ನು ನಾಲ್ಕು ವರ್ಷಗಳ ಹಿಂದೆ ಹೋಳಿ ಹಬ್ಬದಂದು ಪತ್ರಿಕೆಯೊಂದು ಹಾಸ್ಯಮಯವಾಗಿ ಪ್ರಕಟಿಸಿತ್ತು. ಈ ಸುದ್ದಿಯ ಕೆಳಗೆ ಹೋಳಿ ಹಬ್ಬವಾಗಿರೋದ್ರಿಂದ ದುಃಖಿಸಬೇಡಿ ಎಂದು ಸ್ಪಷ್ಟ ಪದಗಳಲ್ಲಿ ಬರೆಯಲಾಗಿದೆ. ಅಷ್ಟೇ ಅಲ್ಲ ‘ಈ ಪೇಜ್‌ನಲ್ಲಿರುವ ಎಲ್ಲಾ ಸುದ್ದಿಗಳು ಕಾಲ್ಪನಿಕ’ ಎಂದು ಸಹ ಬರೆಯಲಾಗಿದೆ. ಪಿಐಬಿ ಫ್ಯಾಕ್ಟ್ ಚೆಕ್ ಈ ವೈರಲ್ ಕಟಿಂಗ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ ಮತ್ತು ಇದು ಸುಳ್ಳು ಸುದ್ದಿ ಎಂದು ಹೇಳಿದೆ.

You Might Also Like

BREAKING: ಮೊದಲ ಟಿ20ಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ತಂತಿ ಬದಲಾಯಿಸುವಾಗ ವಿದ್ಯುತ್ ಪ್ರವಹಿಸಿ ಕಂಬದ ಮೇಲೆಯೇ ವ್ಯಕ್ತಿ ಸಾವು

BREAKING: ಹಾರ್ದಿಕ್ ಪಾಂಡ್ಯ ಸಿಕ್ಸರ್ ಗಳ ಶತಕ: ದಕ್ಷಿಣ ಆಫ್ರಿಕಾ ಗೆಲುವಿಗೆ 176 ರನ್ ಗುರಿ ನೀಡಿದ ಭಾರತ

BIG NEWS: ಕರ್ನಾಟಕ ಅಬಕಾರಿ ನೀತಿ ತಿದ್ದುಪಡಿ ನಿಯಮಗಳಿಗೆ ಹೈಕೋರ್ಟ್ ತಡೆಯಾಜ್ಞೆ

ನೂತನ ಮಾದರಿಯ ಟೆಕ್ನಾಲಜಿ ಬಳಸಿಕೊಂಡು ಘನತ್ಯಾಜ್ಯ ವಿಲೇವಾರಿ: ಡಿಸಿಎಂ ಡಿ.ಕೆ. ಶಿವಕುಮಾರ್

TAGGED:Voters 350ವದಂತಿಮತದಾನelectionsbank accountಲೋಕಸಭೆ ಚುನಾವಣೆನಕಲಿDeductedಹಣ ಕಡಿತ
Share This Article
Facebook Copy Link Print

Latest News

BREAKING: ಮೊದಲ ಟಿ20ಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ತಂತಿ ಬದಲಾಯಿಸುವಾಗ ವಿದ್ಯುತ್ ಪ್ರವಹಿಸಿ ಕಂಬದ ಮೇಲೆಯೇ ವ್ಯಕ್ತಿ ಸಾವು
BREAKING: ಹಾರ್ದಿಕ್ ಪಾಂಡ್ಯ ಸಿಕ್ಸರ್ ಗಳ ಶತಕ: ದಕ್ಷಿಣ ಆಫ್ರಿಕಾ ಗೆಲುವಿಗೆ 176 ರನ್ ಗುರಿ ನೀಡಿದ ಭಾರತ
BIG NEWS: ಕರ್ನಾಟಕ ಅಬಕಾರಿ ನೀತಿ ತಿದ್ದುಪಡಿ ನಿಯಮಗಳಿಗೆ ಹೈಕೋರ್ಟ್ ತಡೆಯಾಜ್ಞೆ

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read

BREAKING : ಕಾರಾಗೃಹ ಇಲಾಖೆಯಲ್ಲಿ ಖಾಲಿ ಇರುವ 1000 ಸಿಬ್ಬಂದಿಗಳ ನೇಮಕಾತಿಗೆ ಗೃಹ ಸಚಿವ ಜಿ. ಪರಮೇಶ್ವರ್ ಆದೇಶ.!
ALERT : ವಾಹನ ಸವಾರರೇ ಎಚ್ಚರ : ‘ಪೆಟ್ರೋಲ್ ಬಂಕ್’ನಲ್ಲಿ ‘0’ ಮಾತ್ರ ನೋಡಬೇಡಿ, ಇದನ್ನು ಚೆಕ್ ಮಾಡಿ.!
Children’s Day 2025 : ಇಂದು ಮಕ್ಕಳ ದಿನಾಚರಣೆ : ಇತಿಹಾಸ ಮತ್ತು ಮಹತ್ವ ತಿಳಿಯಿರಿ.!
ಈ ಎಲ್ಲಾ ಕಾಯಿಲೆಗಳಿಗೆ ರಾಮಬಾಣ ಬೋರೆ ಹಣ್ಣು

Automotive

‘UPI’ ಮೂಲಕ ಮಿಸ್ ಆಗಿ ಬೇರೆಯವರ ಖಾತೆಗೆ ಹಣ ಹಾಕಿದ್ರಾ.? ಹೀಗೆ ಮಾಡಿದ್ರೆ ತಕ್ಷಣ ವಾಪಸ್ ಸಿಗುತ್ತದೆ..!
ಸಾರ್ವಜನಿಕರೇ ಗಮನಿಸಿ : ‘ತುರ್ತು ಸಂದರ್ಭ’ದಲ್ಲಿ ಬೇಕಾಗುವ ಈ ನಂಬರ್ ಸೇವ್ ಮಾಡಿಟ್ಟುಕೊಳ್ಳಿ.!
ALERT : ನಿಮ್ಮ ಮನೆಯಲ್ಲಿ ‘LPG ಗ್ಯಾಸ್’ ಇದೆಯೇ ? ಹಲವರಿಗೆ ಈ ವಿಚಾರ ಗೊತ್ತಿಲ್ಲ, ಬೇಗ ಅಪ್ಲೈ ಮಾಡಿ.!

Entertainment

BIG NEWS: ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ನಟ ರಿಷಬ್ ಶೆಟ್ಟಿ: ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಕೆ
ಜೈಲಲ್ಲಿರುವ ನಟ ದರ್ಶನ್ ಗೆ ಮತ್ತೊಂದು ಶಾಕ್: ಇನ್ನು ಊಟಕ್ಕೆ ಸರತಿ ಸಾಲಿನಲ್ಲಿ ನಿಲ್ಲಬೇಕು
BREAKING: ಸಿನಿಮಾ ತಾರೆಯರು ನಿಜ ಜೀವನದಲ್ಲೂ ಮೌಲ್ಯಯುತವಾಗಿರಬೇಕು: ಸಿಎಂ ಸಿದ್ಧರಾಮಯ್ಯ

Sports

BREAKING: ಮೊದಲ ಟಿ20ಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ
BREAKING: ಹಾರ್ದಿಕ್ ಪಾಂಡ್ಯ ಸಿಕ್ಸರ್ ಗಳ ಶತಕ: ದಕ್ಷಿಣ ಆಫ್ರಿಕಾ ಗೆಲುವಿಗೆ 176 ರನ್ ಗುರಿ ನೀಡಿದ ಭಾರತ
ಮದುವೆ ರದ್ದಾಗುತ್ತಿದ್ದಂತೆ ಬಿಗ್ ಶಾಕ್: ಸ್ಮೃತಿ ಮಂಧಾನಾ ಜೊತೆಗಿನ ಪ್ರಪೋಸಲ್ ವಿಡಿಯೋ ಡಿಲೀಟ್ ಮಾಡಿದ ಪಲಾಶ್ ಮುಚ್ಚಲ್!

Special

Children’s Day 2025 : ಇಂದು ಮಕ್ಕಳ ದಿನಾಚರಣೆ : ಇತಿಹಾಸ ಮತ್ತು ಮಹತ್ವ ತಿಳಿಯಿರಿ.!
ಫುಡ್ ಪಾಯ್ಸನಿಂಗ್ ಗೆ ಕಾರಣವಾಗಬಹುದು ಕತ್ತರಿಸಿಟ್ಟ ಈರುಳ್ಳಿ
ಪ್ಲಾಸ್ಕ್ ನ್ನು ಸ್ವಚ್ಛ ಮಾಡಲು ಫಾಲೋ ಮಾಡಿ ಈ ಸುಲಭ ಟಿಪ್ಸ್

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?