KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಲೋಕಸಭೆ ಚುನಾವಣೆಯಲ್ಲಿ ಮತ ಹಾಕದಿದ್ದರೆ ಬ್ಯಾಂಕ್ ಖಾತೆಯಿಂದ 350 ರೂ. ಕಡಿತ ? ಇಲ್ಲಿದೆ ವದಂತಿ ಹಿಂದಿನ ಅಸಲಿ ಸತ್ಯ….!

Published September 16, 2023 at 12:35 pm
Share
SHARE

ಮುಂದಿನ ವರ್ಷ ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ರಾಜಕೀಯ ಪಕ್ಷಗಳು ಈಗಾಗಲೇ ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿವೆ. ಚುನಾವಣೆಯಲ್ಲಿ ಮತದಾನದ ಕುರಿತಂತೆ ಶಾಕಿಂಗ್‌ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡದಿದ್ದರೆ ಮತದಾರರ ಬ್ಯಾಂಕ್ ಖಾತೆಯಿಂದ 350 ರೂಪಾಯಿ ಕಡಿತಗೊಳಿಸಲಾಗುವುದು ಎಂದು ಈ ವೈರಲ್‌ ಸುದ್ದಿಯಲ್ಲಿ ಹೇಳಲಾಗಿದೆ.

ಆದರೆ ಈ ಮಾಹಿತಿ ಸಂಪೂರ್ಣ ಸುಳ್ಳು. ಕೇಂದ್ರ ಸರ್ಕಾರದ ಸತ್ಯ ತಪಾಸಣೆ ಘಟಕವಾದ ಪಿಐಬಿ ಫ್ಯಾಕ್ಟ್ ಚೆಕ್ ಇದನ್ನು ಸ್ಪಷ್ಟಪಡಿಸಿದೆ. ವೈರಲ್‌ ಆಗಿರೋ ಪತ್ರಿಕೆಯ ತುಣುಕು ಹೋಳಿ ಸಂದರ್ಭದಲ್ಲಿ ಪ್ರಕಟವಾದ ಒಂದು ತಮಾಷೆಯ ಸುದ್ದಿಯಾಗಿದೆ. ಆದರೆ ಜನರು ಈ ಸುದ್ದಿಯನ್ನು ನಿಜವೆಂದು ಸ್ವೀಕರಿಸಲು ಪ್ರಾರಂಭಿಸಿದರು. ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್‌ ಮಾಡಿದ್ದಾರೆ.

ವೈರಲ್ ಫೇಕ್ ನ್ಯೂಸ್‌ನಲ್ಲಿ ಹೇಳಿದ್ದೇನು ?

ಮತದಾನ ಮಾಡದವರನ್ನು ಆಧಾರ್ ಕಾರ್ಡ್ ಮೂಲಕ ಗುರುತಿಸಲಾಗುತ್ತದೆ ಮತ್ತು ಆ ಕಾರ್ಡ್‌ಗೆ ಲಿಂಕ್ ಮಾಡಿದ ಅವರ ಬ್ಯಾಂಕ್ ಖಾತೆಯಿಂದ 350 ರೂಪಾಯಿಗಳನ್ನು ಕಡಿತಗೊಳಿಸಲಾಗುತ್ತದೆ ಎಂದು ವೈರಲ್‌ ನ್ಯೂಸ್‌ನಲ್ಲಿ ತಪ್ಪು ಮಾಹಿತಿ ನೀಡಲಾಗಿದೆ.

ಬ್ಯಾಂಕ್ ಖಾತೆಯಲ್ಲಿ 350 ರೂಪಾಯಿ ಇಲ್ಲದಿದ್ದರೆ ಅಥವಾ ಬ್ಯಾಂಕ್ ಖಾತೆಯೇ ಇಲ್ಲದ ಮತದಾರರು ತಮ್ಮ ಮೊಬೈಲ್ ಫೋನ್ ರೀಚಾರ್ಜ್ ಸಮಯದಲ್ಲಿ ಈ ಹಣವನ್ನು ಕಡಿತಗೊಳಿಸಲಾಗುವುದು ಎಂದು ನಕಲಿ ಸುದ್ದಿಯಲ್ಲಿ ಹೇಳಲಾಗಿದೆ. ಇದಕ್ಕಾಗಿ ಕನಿಷ್ಠ 350 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಮತ್ತು ಇದಕ್ಕಿಂತ ಕಡಿಮೆ ರೀಚಾರ್ಜ್‌ಗೆ ಅವಕಾಶವಿರುವುದಿಲ್ಲ. ಆಯೋಗವು ಈಗಾಗಲೇ ನ್ಯಾಯಾಲಯದಿಂದ ಅನುಮತಿ ಪಡೆದಿರುವುದರಿಂದ ಆಯೋಗದ ನಿರ್ಧಾರದ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂದೆಲ್ಲ ಫೇಕ್‌ ನ್ಯೂಸ್‌ನಲ್ಲಿ ಬರೆಯಲಾಗಿತ್ತು.

ಈ ಸುದ್ದಿಯನ್ನು ನಾಲ್ಕು ವರ್ಷಗಳ ಹಿಂದೆ ಹೋಳಿ ಹಬ್ಬದಂದು ಪತ್ರಿಕೆಯೊಂದು ಹಾಸ್ಯಮಯವಾಗಿ ಪ್ರಕಟಿಸಿತ್ತು. ಈ ಸುದ್ದಿಯ ಕೆಳಗೆ ಹೋಳಿ ಹಬ್ಬವಾಗಿರೋದ್ರಿಂದ ದುಃಖಿಸಬೇಡಿ ಎಂದು ಸ್ಪಷ್ಟ ಪದಗಳಲ್ಲಿ ಬರೆಯಲಾಗಿದೆ. ಅಷ್ಟೇ ಅಲ್ಲ ‘ಈ ಪೇಜ್‌ನಲ್ಲಿರುವ ಎಲ್ಲಾ ಸುದ್ದಿಗಳು ಕಾಲ್ಪನಿಕ’ ಎಂದು ಸಹ ಬರೆಯಲಾಗಿದೆ. ಪಿಐಬಿ ಫ್ಯಾಕ್ಟ್ ಚೆಕ್ ಈ ವೈರಲ್ ಕಟಿಂಗ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ ಮತ್ತು ಇದು ಸುಳ್ಳು ಸುದ್ದಿ ಎಂದು ಹೇಳಿದೆ.

You Might Also Like

BREAKING : ನಟ ಕಿಚ್ಚ ಸುದೀಪ್ ಬಗ್ಗೆ ಅವಹೇಳನಕಾರಿ ಕಮೆಂಟ್ : ಬೆಂಗಳೂರು ಕಮಿಷನರ್’ ಗೆ ದೂರು ಸಲ್ಲಿಕೆ.!

BREAKING: ನಟ ಕಿಚ್ಚ ಸುದೀಪ್ ಬಗ್ಗೆ ಅವಹೇಳನಕಾರಿ ಪೋಸ್ಟ್: ಕಮೀಷನರ್ ಗೆ ದೂರು

BREAKING : ಇಂದು ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಜನ್ಮದಿನ : ಬೆಂಗಳೂರಿನ ‘ಅಭಿಮಾನ್ ಸ್ಟುಡಿಯೋ’ದಲ್ಲಿ ಸಂಭ್ರಮಾಚರಣೆಗೆ ಬ್ರೇಕ್.!

BIG NEWS: ಯುವತಿಯ ವಿಚಾರವಾಗಿ ASI ಪುತ್ರ ಹಾಗೂ ಮತ್ತೋರ್ವನ ನಡುವೆ ಕಿರಿಕ್: ನಡುರಸ್ತೆಯಲ್ಲಿ ಹೊಡೆದಾಡಿಕೊಂಡ ಯುವಕರು

BREAKING: ಧರ್ಮಸ್ಥಳ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್: ಬಂಗ್ಲಗುಡ್ಡದಲ್ಲಿ ಮೂಳೆಗಳ ಜೊತೆ ಹಗ್ಗ-ಸೀರೆ ಪತ್ತೆ: ನೇಣುಬಿಗಿದಿರುವ ಅನುಮಾನ!

TAGGED:Voters 350ವದಂತಿಮತದಾನelectionsbank accountಲೋಕಸಭೆ ಚುನಾವಣೆನಕಲಿDeductedಹಣ ಕಡಿತ
Share This Article
Facebook Copy Link Print

Latest News

BREAKING : ನಟ ಕಿಚ್ಚ ಸುದೀಪ್ ಬಗ್ಗೆ ಅವಹೇಳನಕಾರಿ ಕಮೆಂಟ್ : ಬೆಂಗಳೂರು ಕಮಿಷನರ್’ ಗೆ ದೂರು ಸಲ್ಲಿಕೆ.!
BREAKING: ನಟ ಕಿಚ್ಚ ಸುದೀಪ್ ಬಗ್ಗೆ ಅವಹೇಳನಕಾರಿ ಪೋಸ್ಟ್: ಕಮೀಷನರ್ ಗೆ ದೂರು
BREAKING : ಇಂದು ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಜನ್ಮದಿನ : ಬೆಂಗಳೂರಿನ ‘ಅಭಿಮಾನ್ ಸ್ಟುಡಿಯೋ’ದಲ್ಲಿ ಸಂಭ್ರಮಾಚರಣೆಗೆ ಬ್ರೇಕ್.!
BIG NEWS: ಯುವತಿಯ ವಿಚಾರವಾಗಿ ASI ಪುತ್ರ ಹಾಗೂ ಮತ್ತೋರ್ವನ ನಡುವೆ ಕಿರಿಕ್: ನಡುರಸ್ತೆಯಲ್ಲಿ ಹೊಡೆದಾಡಿಕೊಂಡ ಯುವಕರು

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BIG NEWS: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಹಿಂಪಡೆಯುವಂತೆ ಜಿಲ್ಲಾಧಿಕಾರಿಗೆ ಹಿಂದೂ ಜಾಗರಣ ವೇದಿಕೆ ಮನವಿ
ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಹೆರಿಗೆ ಮಾಡಿಸಿದ ನರ್ಸ್: ತೀವ್ರ ರಕ್ತಸ್ರಾವದಿಂದ ಬಾಣಂತಿ, ಮಗು ಸಾವು
ರಾಜ್ಯ ಸರ್ಕಾರದಿಂದ ವಿಕಲಚೇತನರಿಗೆ ಗುಡ್ ನ್ಯೂಸ್ :   ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
BIG NEWS : ಕರ್ನಾಟಕ ‘SSLC’ ಅರ್ಧವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ, ಸೆ.12 ರಿಂದ ಪರೀಕ್ಷೆ ಆರಂಭ.!

Automotive

BIG NEWS: ವಿಂಡ್‌ ಸ್ಕ್ರೀನ್‌ ಗಳಲ್ಲಿ ಫಾಸ್ಟ್‌ ಟ್ಯಾಗ್‌ ಇಲ್ಲದ ವಾಹನಗಳು ಕಪ್ಪುಪಟ್ಟಿಗೆ ಸೇರ್ಪಡೆ: NHAI ಘೋಷಣೆ
ಹಳೆ ವಾಹನ ಮಾಲೀಕರಿಗೆ ಬಿಗ್ ಶಾಕ್: ನವೀಕರಣ ಶುಲ್ಕ ಭಾರೀ ಏರಿಕೆ
BIG ALERT : ‘G-mail’ ಬಳಕೆದಾರರಿಗೆ ಬಿಗ್ ಅಲರ್ಟ್ : ಹೀಗೆ ಮಾಡದಂತೆ ‘ಸೈಬರ್ ತಜ್ಞ’ರಿಂದ ಎಚ್ಚರಿಕೆ.!

Entertainment

BIG NEWS: ನಟಿ ದಿ.ಬಿ.ಸರೋಜಾದೇವಿ ಹೆಸರಲ್ಲಿ ‘ಅಭಿನಯ ಸರಸ್ವತಿ’ ಪ್ರಶಸ್ತಿ ಘೋಷಣೆ
SHOCKING : ‘ಪಾರ್ಕಿಂಗ್’ ವಿಚಾರಕ್ಕೆ ಬಾಲಿವುಡ್ ನಟಿ ‘ಹುಮಾ ಖುರೇಷಿ’ ಸಹೋದರನ ಬರ್ಬರ ಹತ್ಯೆ : ಭಯಾನಕ ವೀಡಿಯೋ ವೈರಲ್ |WATCH VIDEO
‘ಸ್ವಾತಂತ್ರ್ಯ ದಿನಾಚರಣೆ’ ಪ್ರಯುಕ್ತ ‘ಬಾರ್ಡರ್ -2’ ಬಿಡುಗಡೆ ದಿನಾಂಕ ಘೋಷಣೆ , ಹೊಸ ಮೋಷನ್ ಪೋಸ್ಟರ್ ರಿಲೀಸ್.!

Sports

BREAKING: ಪಾಕಿಸ್ತಾನ ನಾಯಕನಿಗೆ ಕ್ಷಮೆಯಾಚಿಸಿದ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್: ಹ್ಯಾಂಡ್‌ ಶೇಕ್ ವಿವಾದದ ಬಗ್ಗೆ ಐಸಿಸಿ ವಿಚಾರಣೆ: ಪಿಸಿಬಿ
BREAKING: ಯಾವುದೇ ಬೇಡಿಕೆ, ಬೆದರಿಕೆಗೆ ಬಗ್ಗದ ಐಸಿಸಿ: ಯುಎಇ ವಿರುದ್ಧ ಪಂದ್ಯವಾಡಲು ಬಂದ ಪಾಕಿಸ್ತಾನ
BREAKING: ಭಾರತದೊಂದಿಗೆ ಹ್ಯಾಂಡ್‌ ಶೇಕ್ ವಿವಾದ: ಏಷ್ಯಾ ಕಪ್ ಟೂರ್ನಿಯಿಂದ ಹಿಂದೆ ಸರಿದ ಪಾಕಿಸ್ತಾನ

Special

ತೂಕ ಇಳಿಸಲು ನೆಲದ ಮೇಲೆ ವಾಕಿಂಗ್‌ ಅಥವಾ ಟ್ರೆಡ್‌ಮಿಲ್‌ ಯಾವುದು ಬೆಸ್ಟ್‌…..?
ಅನೇಕ ರೋಗಗಳಿಗೆ ಮದ್ದು ಪ್ರೀತಿಯ ಅಪ್ಪುಗೆ, ತಬ್ಬಿಕೊಳ್ಳುವುದರಿಂದ ಆಗುತ್ತೆ ಇಷ್ಟೆಲ್ಲಾ ಪ್ರಯೋಜನ……!
ʼಕೋಲ್ಡ್ ವಾಟರ್ʼ ಕುಡಿಯುವುದಾಗುವ ಪರಿಣಾಮ ಏನು ಗೊತ್ತಾ..…?

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?