ಹಠಾತ್ ಸಾವನ್ನಪ್ಪಿದ 27 ಕುರಿಗಳು; ಕಾರಣ ಪತ್ತೆಗೆ ಮುಂದಾದ ಪಶು ವೈದ್ಯರು

ಬೆಳಗಾವಿ | ಸುವರ್ಣ ಸೌಧದ ಬಳಿ ತಿಪ್ಪೆಗೆ ಬಿಸಾಡಿದ್ದ ಆಹಾರ ಸೇವಿಸಿ 10 ಕುರಿಗಳ ಸಾವು |  Eedina | ಈದಿನನೂರಾರು ಕುರಿಗಳು ತೋಟವೊಂದರಲ್ಲಿ ಬೀಡು ಬಿಟ್ಟಿದ್ದ ವೇಳೆ ಇವುಗಳ ಪೈಕಿ 27 ಕುರಿಗಳು ಹಠಾತ್ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ರಾಮದುರ್ಗ ತಾಲೂಕಿನ ಸುರೇಬಾನ – ಮನಿಹಾಳ ಗ್ರಾಮದ ತೋಟವೊಂದರಲ್ಲಿ ಚಿಲಮೂರ ಗ್ರಾಮದ ವಿಠ್ಠಲ ಲಕ್ಕಪ್ಪ ಸನದಿ ಅವರಿಗೆ ಸೇರಿದ ನೂರಕ್ಕೂ ಅಧಿಕ ಕುರಿಗಳು ಬೀಡು ಬಿಟ್ಟಿದ್ದವು.

ಸೋಮವಾರ ಬೆಳಿಗ್ಗೆ ವಿಠಲ ಅವರು ಕುರಿಗಳೊಂದಿಗೆ ರಾಮದುರ್ಗಕ್ಕೆ ಹೊರಟಿದ್ದು, ಈ ವೇಳೆ ಮಾರ್ಗ ಮಧ್ಯೆ 27 ಕುರಿಗಳು ಏಕಾಏಕಿ ಮೃತಪಟ್ಟಿವೆ.

ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರೋಗ ಅಥವಾ ವಿಷಯುಕ್ತ ಆಹಾರ ಸೇವನೆಯಿಂದ ಮೃತಪಟ್ಟಿವೆಯೇ ಎಂಬುದರ ಕಾರಣ ಅರಿಯಲು ಮರಣೋತ್ತರ ಪರೀಕ್ಷೆಗೆ ಕ್ರಮ ಕೈಗೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read