ದೇವರ ದರ್ಶನ ಮುಗಿಸಿಕೊಂಡು ಬರುವಾಗಲೇ ದುರಂತ; ಅಪಘಾತದಲ್ಲಿ ಮಾವ – ಸೊಸೆ ಸಾವು

ದೇವರ ದರ್ಶನಕ್ಕೆಂದು ತೆರಳಿ ದರ್ಶನ ಮುಗಿಸಿಕೊಂಡ ಬಳಿಕ ವಾಪಸ್ ಬರುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ ಮಾವ – ಸೊಸೆ ಸಾವನ್ನಪ್ಪಿರುವ ಘಟನೆ ಹಾವೇರಿ ಸಮೀಪ ನಡೆದಿದೆ.

ವಿಜಯಪುರ ಜಿಲ್ಲೆ ರಬಕವಿ ನಿವಾಸಿ 70 ವರ್ಷದ ರಾಜಣ್ಣ ವೀರಭದ್ರಪ್ಪ ಅಬ್ದುಲಪೂರ ಹಾಗೂ ಅವರ ಸೊಸೆ 35 ವರ್ಷದ ಚೇತನಾ ವೀರಭದ್ರಪ್ಪ ಅಬ್ದುಲಪೂರ ಮೃತಪಟ್ಟವರಾಗಿದ್ದಾರೆ.

ಇವರುಗಳು ದಾವಣಗೆರೆ ಜಿಲ್ಲೆ ಮಲೆಬೆನ್ನೂರು ಸಮೀಪವಿರುವ ವೀರಭದ್ರೇಶ್ವರ ದರ್ಶನಕ್ಕೆ ಬಂದಿದ್ದು, ವಾಪಸ್ ಹೋಗುವಾಗ ಹಾವೇರಿ ಬಳಿ ಅಪಘಾತ ಸಂಭವಿಸಿತ್ತು.

ಇದರ ಪರಿಣಾಮ ಚೇತನಾ ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ರಾಜಣ್ಣ ಹಾವೇರಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read