ದುಡ್ಡು ಮರಳಿಸುವಂತೆ ಕಾರ್ಯಕರ್ತನಿಗೆ ಶಾಸಕ ಶಿವಲಿಂಗೇಗೌಡ ತಾಕೀತು; ಆಡಿಯೋ ವೈರಲ್

ಅರಸೀಕೆರೆ ಕ್ಷೇತ್ರದ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಸದ್ಯದಲ್ಲಿಯೇ ಕಾಂಗ್ರೆಸ್ ಸೇರ್ಪಡೆಗೊಂಡು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾಗಿದೆ. ಅವರ ಕಾಂಗ್ರೆಸ್ ಸೇರ್ಪಡೆಗೆ ಸಿದ್ಧತೆಗಳು ನಡೆಯುತ್ತಿರುವ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಆಡಿಯೋ ಒಂದು ಹರಿದಾಡುತ್ತಿದೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪರ ಕೆಲಸ ಮಾಡುವ ಸಲುವಾಗಿ ಗ್ರಾಮ ಪಂಚಾಯಿತಿ ಸದಸ್ಯೆ ಪತಿಯೊಬ್ಬರಿಗೆ 50,000 ರೂಪಾಯಿಗಳನ್ನು ಶಿವಲಿಂಗೇಗೌಡ ನೀಡಿದ್ದರೆನ್ನಲಾಗಿದ್ದು, ಆತ ಈಗ ತಮ್ಮ ವಿರುದ್ಧ ಕೆಲಸ ಮಾಡುತ್ತಿರುವ ಕಾರಣ ಹಣ ನೀಡುವಂತೆ ಶಿವಲಿಂಗೇಗೌಡ ಕರೆ ಮಾಡಿದ್ದಾರೆ.

ಗ್ರಾಮ ಪಂಚಾಯಿತಿ ಸದಸ್ಯೆ ಸೌಮ್ಯ ಅವರ ಪತಿ ವಾಸುಗೆ ಶಿವಲಿಂಗೇಗೌಡರು ಕರೆ ಮಾಡಿದ್ದು, ನೀನು ಬೇರೆಯವರ ಪರ ಕೆಲಸ ಮಾಡಲು ಮುಂದಾಗಿರುವುದು ನನಗೆ ಗೊತ್ತಾಗಿದೆ. ಹೀಗಾಗಿ ನಾನು ನೀಡಿದ ಐವತ್ತು ಸಾವಿರ ರೂಪಾಯಿಗಳನ್ನು ವಾಪಸ್ ಕೊಡು ಎಂದು ತಾಕೀತು ಮಾಡಿದ್ದಾರೆ. ಅದಕ್ಕೆ ಆತ, ನೀವಾಗಿಯೇ ಕೊಟ್ಟಿದ್ದೀರಿ. ನಾನೇನು ಹಣ ಕೇಳಿರಲಿಲ್ಲ. ಈಗ ನನ್ನ ಬಳಿ ಹಣ ಇಲ್ಲ ಎಂದು ಹೇಳಿದ್ದಾನೆ. ಈ ಆಡಿಯೋ ಈಗ ವೈರಲ್ ಆಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read