ಇಲ್ಲಿವೆ ಮಳೆಗಾಲದಲ್ಲಿ ಆರೋಗ್ಯಕ್ಕೆ ಬೇಕಾದ ಟಿಪ್ಸ್

ಪ್ರತಿಯೊಬ್ಬರೂ ಮಳೆಗಾಲವನ್ನು ಪ್ರೀತಿಸುತ್ತಾರೆ. ಆದರೆ ಈ ಋತುವಿನಲ್ಲಿ ಅನೇಕ ರೋಗಗಳು ನಮ್ಮನ್ನು ಕಾಡುತ್ತವೆ. ಸೋಂಕು ವೇಗವಾಗಿ ಹರಡುತ್ತದೆ. ಆದ್ದರಿಂದ ಈ ಸಮಯದಲ್ಲಿ ಆಹಾರ ಮತ್ತು ಜೀವನಶೈಲಿ ಬಗ್ಗೆ ವಿಶೇಷ ಗಮನ ನೀಡಬೇಕಾಗುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ಸೇವಿಸಬೇಕು. ಕೋಸುಗಡ್ಡೆ, ಕ್ಯಾರೆಟ್, ಅರಿಶಿನ, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಸೇರಿಸಿ. ಇವು ಚರ್ಮ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿ. ಶುಂಠಿ ಮತ್ತು ಬೆಳ್ಳುಳ್ಳಿಯಲ್ಲಿ ಆಂಟಿಬ್ಯಾಕ್ಟೀರಿಯಲ್ ಅಂಶಗಳಿವೆ. ಇದು ಉಸಿರಾಟ, ಚರ್ಮ ಮತ್ತು ಶೀತಗಳ ಸಮಸ್ಯೆಗಳನ್ನು ನಿವಾರಿಸುತ್ತದೆ.

ಈ ಸಮಯದಲ್ಲಿ ಹೊರಗಿನ ಆಹಾರವನ್ನು ಸೇವಿಸಬೇಡಿ. ದೀರ್ಘಕಾಲ ಕತ್ತರಿಸಿದ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಬೇಡಿ. ಬೇಯಿಸದೆ ಆಹಾರ ಸೇವನೆ ಮಾಡಬೇಡಿ. ಮಳೆಗಾಲದಲ್ಲಿ ಜಂಕ್ ಫುಡ್ ಸೇವನೆ ಬೇಡ.

ಮಳೆಗಾಲದಲ್ಲಿ ಅನೇಕ ಜನರು ಮಲೇರಿಯಾದಿಂದ ಬಳಲುತ್ತಾರೆ. ಆದ್ದರಿಂದ  ಈ ಅವಧಿಯಲ್ಲಿ ಸೊಳ್ಳೆಗಳಿಂದ ದೂರವಿರಿ. ನೀರು ನಿಲ್ಲದಂತೆ ನೋಡಿಕೊಳ್ಳಿ. ಉದ್ದ ತೋಳಿನ ಬಟ್ಟೆ ಧರಿಸಿ.

ಮಳೆಗಾಲದಲ್ಲಿ ಅಲರ್ಜಿ ಮತ್ತು ಚರ್ಮದ ಸಮಸ್ಯೆಗಳೂ ಹೆಚ್ಚಾಗುತ್ತವೆ. ಈಗಾಗಲೇ  ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದರೆ ಎಚ್ಚರ ವಹಿಸಿ. ತೇವದ ಬಟ್ಟೆಯನ್ನು ಧರಿಸಬೇಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read