ಅಡುಗೆ ಅನಿಲ ದುರಂತ; ಗಾಯಗೊಂಡಿದ್ದ ಮೂವರ ದುರ್ಮರಣ; ಅನಾಥವಾದ ಮೂರು ತಿಂಗಳ ಕಂದಮ್ಮ

ಗದಗ: ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂವರು ಚಿಕಿತ್ಸೆ ಫಲಿಸದೇ ಸಾವನ್ನಪಿರುವ ಘಟನೆ ಗದಗ ಜಿಲ್ಲೆಯ ಮುಳಗುಂದದ ಚಿಂದಿಪೇಟೆಯಲ್ಲಿ ನಡೆದಿದೆ.

ಜನವರಿ 26ರಂದು ಸಂಭವಿಸಿದ್ದ ದುರಂತದಲ್ಲಿ ಬಸವಣ್ಣಪ್ಪ ಹಡಪದ, ಬಾಲಕ ಆದರ್ಶ ಹಾಗೂ ಆತನ ತಾಯಿ ಬಾಣಂತಿ ಯಶೋಧಾ ಬೆಂತೂರ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೂವರು ಸಾವನ್ನಪ್ಪಿದ್ದಾರೆ.

ಮೃತ ಮಹಿಳೆ ಯಶೋಧಾಗೆ ಮೂರು ತಿಂಗಳ ಮಗುವಿದ್ದು, ಘಟನೆಯಲ್ಲಿ ಮಗು ಪ್ರಾಣಾಪಾಯದಿಮ್ದ ಪಾರಾಗಿದೆ. ಆದರೆ ಮೂರು ತಿಂಗಳ ಮಗು ತಾಯಿ ಹಾಗೂ ಅಣ್ಣನನ್ನು ಕಳೆದುಕೊಂಡು ತಬ್ಬಲಿಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read