ಮಂಡ್ಯ: ಮಚ್ಚು ಹಿಡಿದು ನಟ ದರ್ಶನ್ ಅವರ ಇದ್ರೆ ನೆಮ್ಮದಿಯಾಗ್ ಇರ್ಬೇಕು ಹಾಡಿಗೆ ರೀಲ್ಸ್ ಮಾಡಿದ್ದ ಯುವಕನಿಗೆ ಪೊಲೀಸರು ಬುದ್ಧಿ ಕಲಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯದ ಕಾರಸವಾಡಿ ಗ್ರಾಮದ ಯುವಕ ಪವನ್ ಎಂಬಾತ ಮಚ್ಚು ಹಿಡಿದು ದರ್ಶನ್ ಸಾಂಗ್ ಗೆ ರೀಲ್ಸ್ ಮಾಡಿದ್ದ. ಆತನನ್ನು ಹಿಡಿದು ತಂಡ ಪೊಲೀಸರು ಠಾಣೆಯ ಮುಂದೆ ನಿಲ್ಲಿಸಿ ಕ್ಷಮೆ ಕೇಳಿಸಿದ್ದಾರೆ. ಅದನ್ನು ವಿಡಿಯೋ ಮಾಡಿ ಟ್ರೋಲ್ ಮಾಡಿದ್ದಾರೆ.
ಮಾರಕಾಸ್ತ್ರಗಳನ್ನು ಹಿಡಿದು ಪೋಸ್ ಕೊಡುವ ಪುಡಿರೌಡಿಗಳಿಗೆ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.