BIG NEWS: ಸ್ನೇಹಿತರ ಜೊತೆ ಈಜಲು ಹೋಗಿದ್ದ ಯುವಕ: ಕಾವೇರಿ ನದಿ ಪಾಲು

ಚಾಮರಾಜನಗರ: ಸ್ನೇಹಿತರೊಂದಿಗೆ ನದಿಗೆ ಈಜಲು ಹೋಗಿದ್ದ ಯುವಕ ಕಾವೇರಿ ನದಿ ಪಾಲಾಗಿರುವ ಘಟನೆ ಚಾಮರಾಜನಗರದ ಕೊಳ್ಳೆಗಾಲ ತಾಲೂಕಿನ ಶಿವನಸಮುದ್ರ ವೆಸ್ಲಿ ಸೇತುವೆ ಬಳಿ ನಡೆದಿದೆ.

ಸಾಹಿಲ್ ಪಾಷಾ (23) ಮೃತ ಯುವಕ. ಬೆಂಗಳೂರಿನ ಜೆಪಿ ನಗರದ ನಿವಾಸಿ. 9 ಜನ ಸ್ನೇಹಿತರೊಂದಿಗೆ ನದಿಯಲ್ಲಿ ಈಜಲು ತೆರಳಿದ್ದ. ಈ ವೇಳೆ ದುರಂತ ಅಂತ್ಯ ಕಂಡಿದ್ದಾನೆ.

ರಂಜಾನ್ ಮುಗಿದ ಹಿನ್ನೆಲೆಯಲ್ಲಿ ಸ್ಸಾಹಿಲ್ ಹಾಗೂ ಸ್ನೇಹಿತರ ಗುಂಪು ಶಿವನಸಮುದ್ರ ಬಳಿಯ ದರ್ಗಾಕ್ಕೆ ಹೋಗಿದ್ದರು. ಪ್ರಾಥನೆ ಸಲ್ಲಿಸಿ ಬಳಿಕ ಸೇತುವೆ ಬಳಿ ಕಲ್ಲುಬಂಡೆ ಬಳಿ ಹೋಗಿದ್ದವರು ನದಿಯಲ್ಲಿ ಈಜಲು ಇಳಿದಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿ ಸಾಹಿಲ್ ಸಾವನ್ನಪ್ಪಿದ್ದಾನೆ.

ಕೊಳ್ಳೆಗಾಲ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read