ಪಕ್ಷದ ನಾಯಕರ ಸಭೆಗೆ ಯಡಿಯೂರಪ್ಪರಿಗೆ ಆಹ್ವಾನ ನೀಡದ ಬಗ್ಗೆ ಸಿಎಂ ಹೇಳಿದ್ದೇನು ಗೊತ್ತಾ…?

ಬೆಂಗಳೂರು: ರಾಜ್ಯ ಬಿಜೆಪಿ ನಾಯಕರ ಸಭೆಗೆ ಯಡಿಯೂರಪ್ಪ ಅವರನ್ನು ಆಹ್ವಾನಿಸದ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಸಿಎಂ, ಇಂದು ನಡೆದಿರುವುದು ಪ್ರಾಥಮಿಕ ಹಂತದ ಸಭೆಯಾಗಿದೆ. ಇಲ್ಲಿ ಚರ್ಚೆ ಮಾಡಿದ ಬಳಿಕ ದೊಡ್ಡವರ ಜೊತೆಗೆ ಮಾತುಕತೆ ಇರುತ್ತದೆ. ದೊಡ್ಡವರ ಅಭಿಪ್ರಾಯದ ನಂತರ ಕೈಗೊಂಡ ನಿರ್ಣಯ ಅಂತಿಮವಾಗಿರುತ್ತದೆ. ಅದನ್ನು ಅಂತಿಮಗೊಳಿಸುವಾಗ ಯಡಿಯೂರಪ್ಪನವರನ್ನು ಸಂಪರ್ಕಿಸುತ್ತೇವೆ ಎಂದು ಹೇಳಿದ್ದಾರೆ.

ಹೀಗೆ ಹೇಳುವ ಮೂಲಕ ಯಡಿಯೂರಪ್ಪ ದೊಡ್ಡವರು ಎಂದು ಸಿಎಂ ಪರೋಕ್ಷವಾಗಿ ತಿಳಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read