BIG NEWS: ವೈ ಜಿ ಗುಡ್ಡ ಡ್ಯಾಂ ನಲ್ಲಿ ದುರಂತ: ಮೂವರು ಯುವತಿಯರು ಜಲಸಮಾಧಿ

ರಾಮನಗರ: ವೈಜಿ ಗುಡ್ಡ ಡ್ಯಾಂ ನಲ್ಲಿ ಮೂವರು ಯುವತಿಯರು ಮುಳುಗಿ ಸಾವನ್ನಪ್ಪಿರುವ ದಾರುನ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ನಡೆದಿದೆ.

ಬೆಂಗಳೂರು ಮೂಲದ ರಾಘವಿ (18), ಮಧುಮಿತ (20) ಹಾಗೂ ರಮ್ಯಾ (22) ಮೃತ ಯುವತಿಯರು. 7 ಜನ ಯುವತಿಯರು ಜಲಾಶಯ ವೀಕ್ಷಣೆಗೆಂದು ಹೋಗಿದ್ದರು. ಈ ವೇಳೆ ಓರ್ವ ಯುವತಿ ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದಾಳೆ. ಈ ವೇಳೆ ಉಳಿದವರು ಆಕೆಯ ರಕ್ಷಣೆಗೆಂದು ನೀರಿಗೆ ಇಳಿದಿದ್ದಾರೆ. ಘಟನೆಯಲ್ಲಿ ಮೂವರು ಯುವತಿಯರು ನೀರುಪಾಲಾಗಿದ್ದಾರೆ. ಉಳಿದವರನ್ನು ಓರ್ವ ಯುವಕ ರಕ್ಷಿಸಿದ್ದಾನೆ.

ಬೆಂಗಳೂರಿನ ಸಂಬಂಧಿಕರ ಮನೆಗೆಂದು ಬಂದಿದ್ದ ಯುವತಿಯರು ವೈ ಜಿ ಗುಡ್ಡ ಜಲಾಶಯ ನೋಡಲೆಂಡು ಹೋಗಿದ್ದರು. ಈ ವೇಳೆ ಮೂವರು ದುರಂತಕ್ಕೀಡಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read