ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ರಕ್ಷಿಸಿದ ಯುವಕರು

ಕೊಡಗು: ನದಿ ಮಧ್ಯೆ ಕಲ್ಲು ಬಂಡೆ ಮೇಲೆ ಕುಳಿತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಮಹಿಳೆಯನ್ನು ಯುವಕರ ಗುಂಪು ರಕ್ಷಿಸಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

ಕೊಡಗಿನ ವಿರಾಜಪೇಟೆ ತಾಲೂಕಿನ ಬೇತ್ರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪೊನ್ನಂಪೇಟೆಯ ಎಂ.ಜಿ.ನಗರದ ನಿವಾಸಿ ನಿರ್ಮಲಾ (48) ಎಂಬ ಮಹಿಳೆ ನದಿಯ ಮಧ್ಯೆ ಇದ್ದ ಬಂಡೆಯ ಮೇಲೆ ಕುಳಿತಿದ್ದರು. ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ನಿರ್ಮಲಾ ಅವರನ್ನು ಸ್ಥಳೀಯ ಯುವಕರು ರಕ್ಷಿಸಿದ್ದಾರೆ.

ನಿರ್ಮಲಾ ಅವರ ಪುತ್ರಿ ಇತ್ತೀಚೆಗೆ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಮಗಳ ಅಗಲಿಕೆ ಬಳಿಕ ನಿರ್ಮಲಾ ಖಿನ್ನತೆಯಿಂದ ಬಳಲುತ್ತಿದ್ದಿರು. ಮಗಳ ಕಳೆದುಕೊಂಡ ನೋವಿನಲ್ಲೇ ದಿಕ್ಕೇ ತೋಚದೇ ನಿರ್ಮಲಾ ಅತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ.

ಸದ್ಯ ನಿರ್ಮಲಾ ಅವರನ್ನು ಅಶ್ರಫ್, ಯೂನಸ್ ಹಾಗೂ ಷರೀಫ್ ಎಂಬ ಮೂವರು ಯುವಕರು ರಕ್ಷಣೆ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read