ದೇಶದ ಉತ್ತರ ಮತ್ತು ಮಧ್ಯ ಭಾಗಗಳಲ್ಲಿ ಬಿರು ಬಿಸಿಲಿನ ತಾಪ ಹೆಚ್ಚಾಗಿದ್ದು, ಜನರು ಈ ವಿಪರೀತ ಶಾಖದಿಂದ ಬಳಲಿ ಬೆಂಡಾಗಿದ್ದಾರೆ. ಕೆಲವು ಭಾಗಗಳಲ್ಲಿ ತುಂತುರು ಮಳೆಯಾದ್ರೆ, ಇನ್ನೂ ಕೆಲವು ಭಾಗಗಳು ತೀವ್ರವಾದ ಶಾಖದ ಅಲೆಗೆ ತತ್ತರಿಸುತ್ತಿವೆ.
ಇಂತಹ ಸಂದಿಗ್ಧ ಸಮಯದಲ್ಲಿ, ಅಗತ್ಯವಿರುವವರಿಗೆ ಸಹಾಯ ಹಸ್ತ ಚಾಚುವ ಕೆಲವು ಒಳ್ಳೆಯ ವ್ಯಕ್ತಿಗಳು, ಮಾನವೀಯತೆಯುಳ್ಳವರು ಸಹ ನಮ್ಮ ನಡುವೆ ಇದ್ದಾರೆ. ಇದೀಗ ಸಾಮಾಜಿಕ ಕಾರ್ಯಕರ್ತೆ ಖುಷಿ ಪಾಂಡೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಟ್ವಿಟ್ಟರ್ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಬಿಸಿಲಿನ ಶಾಖದಿಂದ ಕೊಂಚ ಪರಿಹಾರವನ್ನು ಪಡೆಯಲು ರಿಕ್ಷಾ ಚಾಲಕರು ಮತ್ತು ಬೀದಿ ವ್ಯಾಪಾರಿಗಳಿಗೆ ಹತ್ತಿ ಟವೆಲ್ ವಿತರಿಸಿದ್ದಾರೆ. ಭಾರತೀಯ ಹವಾಮಾನ ಇಲಾಖೆ ಬಿಸಿಲಿನ ಪ್ರಖರತೆ ಮತ್ತಷ್ಟು ಹೆಚ್ಚಾಗುವ ಎಚ್ಚರಿಕೆಯನ್ನು ನೀಡಿದೆ. ಇದಕ್ಕಾಗಿ ನಾವು ದಿನವಿಡೀ ಕಷ್ಟಪಟ್ಟು ಕೆಲಸ ಮಾಡುವ ರಿಕ್ಷಾ ಚಾಲಕರು, ಬೀದಿ ವ್ಯಾಪಾರಿಗಳಿಗೆ ಕಾಟನ್ ಟವೆಲ್ ವಿತರಿಸಿದ್ದೇವೆ. ನಮ್ಮ ಏಕೈಕ ಪ್ರಯತ್ನವೆಂದರೆ ಅವರನ್ನು ಸ್ವಲ್ಪವಾದರೂ ಆರಾಮದಾಯಕವಾಗಿರಿಸುವುದು ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೋ ಹಲವಾರು ವೀಕ್ಷಣೆಗಳನ್ನು ಮತ್ತು ಟನ್ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ಜನರು ಪಾಂಡೆ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಜೀವನೋಪಾಯಕ್ಕಾಗಿ ದುಡಿಯುವ ಇಂತಹ ಜನರಿಗೆ ಸಹಾಯಹಸ್ತ ಚಾಚಬೇಕು ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
As the Indian Meteorological Department (IMD) issues a heatwave warning, so we have distributed “Gamcha” to rickshaw pullers, Street Vendors who are working hard throughout the day. Our only endeavor is to make things a tad bit comfortable for them. 🥹 pic.twitter.com/O9JjGZXL3A
— Khushi Pandey (@KhushiPand46589) May 24, 2023
— Dinesh Chowdary (@dcstunner999) May 24, 2023
Being Human 👏👏
— Vinod Malik (@VinodMa79346800) May 24, 2023