ಕರೆ ಮಾಡುವಂತೆ ಪತ್ನಿಗೆ ಕಾಟ ಕೊಡುತ್ತಿದ್ದ ವ್ಯಕ್ತಿಗೆ ರಸ್ತೆಯಲ್ಲೇ ಥಳಿಸಿದ ಪತಿ

ಚಿಕ್ಕಮಗಳೂರು: ಕರೆ ಮಾಡುವಂತೆ ಮಹಿಳೆಗೆ ಕಾಟ ಕೊಡುತ್ತಿದ್ದ ವ್ಯಕ್ತಿಗೆ ಪತಿ ಥಳಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಜಯಪುರ ಸಮೀಪದ ಕಟ್ಟೆಮನೆ ಗ್ರಾಮದಲ್ಲಿ ನಡೆದಿದೆ.

ಜಯಪುರದಲ್ಲಿ ಡಿಶ್ ರಿಪೇರಿ ಕೆಲಸ ಮಾಡಿಕೊಂಡಿದ್ದ ಬಶೀರ್ ಎಂಬಾತನೇ ಕಿರುಕುಳ ನೀಡಿದ ವ್ಯಕ್ತಿ. ಡಿಶ್ ರಿಪೇರಿಗೆ ಬಂದ ವೇಳೆ ಮಹಿಳೆಗೆ ನಂಬರ್ ಕೊಟ್ಟಿದ್ದ ಬಶೀರ್ ಕರೆ ಮಾಡುವಂತೆ ಪೀಡಿಸಿದ್ದು, ಆತನ ಕಿರುಕುಳದ ಬಗ್ಗೆ ಮಹಿಳೆ ತನ್ನ ಪತಿ ರಮೇಶ್ ಗೆ ತಿಳಿಸಿದ್ದಾರೆ.

ಬಶೀರ್ ನಡುರಸ್ತೆಯಲ್ಲಿ ಎದುರಾಗಿದ್ದು, ಅಲ್ಲಿಯೇ ಅಡ್ಡಗಟ್ಟಿದ ರಮೇಶ್ ಅಟ್ಟಾಡಿಸಿ ಹೊಡೆದಿದ್ದಾನೆ. ಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read