KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ವಾಟ್ಸಾಪ್‌ ಬಳಕೆದಾರರ ಖಾತೆಯನ್ನು ಯಾವಾಗ ನಿಷೇಧಿಸುತ್ತದೆ….? ಇಲ್ಲಿದೆ ಅದರ ನಿಯಮಗಳ ಕುರಿತ ಸಂಪೂರ್ಣ ವಿವರ

Published April 5, 2024 at 10:49 am
Share
SHARE

ಪ್ರಪಂಚದಾದ್ಯಂತ ವಾಟ್ಸಾಪ್‌ ಬಳಕೆಯಲ್ಲಿದೆ. ಇದು ಬಹಳ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌. ಸದ್ಯ ವಾಟ್ಸಾಪ್‌ ತನ್ನ ಬಳಕೆದಾರರ ಅನುಭವವನ್ನು ಸುಧಾರಿಸಲು ಪ್ರಯತ್ನಿಸುತ್ತಿದೆ. ಇತ್ತೀಚೆಗಷ್ಟೆ ದೇಶದಲ್ಲಿ ಸುಳ್ಳು ಸುದ್ದಿಗಳನ್ನು ಹರಡುವ ಲಕ್ಷಾಂತರ ಖಾತೆಗಳನ್ನು ವಾಟ್ಸಾಪ್‌  ನಿಷೇಧಿಸಿದೆ. ಫೆಬ್ರವರಿ ತಿಂಗಳಲ್ಲಿ ಭಾರತದಲ್ಲಿ 76 ಲಕ್ಷಕ್ಕೂ ಹೆಚ್ಚು ವಾಟ್ಸಾಪ್‌ ಖಾತೆಗಳನ್ನು ಬಂದ್‌ ಮಾಡಲಾಗಿದೆ. ವಾಟ್ಸಾಪ್‌ ಬಳಕೆದಾರರ ಖಾತೆಯನ್ನು ಯಾವಾಗ ನಿಷೇಧಿಸುತ್ತದೆ? ಅದರ ನಿಯಮಗಳೇನು ಎಂಬುದನ್ನು ತಿಳಿದುಕೊಳ್ಳೋಣ.

ವಾಟ್ಸಾಪ್‌ ಖಾತೆಯನ್ನು ಏಕೆ ನಿಷೇಧಿಸಲಾಗುತ್ತದೆ?

ಬಳಕೆದಾರರು ಸ್ಪ್ಯಾಮ್ ಸಂದೇಶಗಳನ್ನು ಕಳುಹಿಸಿದರೆ, ತಪ್ಪು ಮಾಹಿತಿಯನ್ನು ಹರಡಿದರೆ ಅಥವಾ ವಾಟ್ಸಾಪ್‌ ಮೂಲಕ ವಂಚನೆ ಮಾಡಿದರೆ ಖಾತೆಯನ್ನು ನಿಷೇಧಿಸಬಹುದು. ಅಶ್ಲೀಲತೆ, ಹಿಂಸೆ ಅಥವಾ ದ್ವೇಷಪೂರಿತ ವಿಷಯವನ್ನು ಹಂಚಿಕೊಂಡರೂ ಸಹ ಬಳಕೆದಾರರ ವಿರುದ್ಧ ವಾಟ್ಸಾಪ್‌ ಕ್ರಮ ತೆಗೆದುಕೊಳ್ಳಬಹುದು.

ಭಾರತ ಸರ್ಕಾರದ ಐಟಿ ನಿಯಮ 2021ರ ಅನ್ವಯ ವಾಟ್ಸಾಪ್‌ ಖಾತೆಗಳನ್ನು ಬಂದ್‌ ಮಾಡಿರುವುದಾಗಿ ಕಂಪನಿ ಹೇಳಿಕೊಂಡಿದೆ. ಫೆಬ್ರವರಿ 1 ರಿಂದ ಫೆಬ್ರವರಿ 29ರ ನಡುವೆ ಒಟ್ಟು 76,28,000 ಖಾತೆಗಳನ್ನು ಮುಚ್ಚಿರುವುದಾಗಿ ವಾಟ್ಸಾಪ್‌ ಮಾಹಿತಿ ನೀಡಿದೆ. ಇವುಗಳಲ್ಲಿ 14,24,000 ಖಾತೆಗಳನ್ನು ಯಾವುದೇ ಬಳಕೆದಾರರು ದೂರು ನೀಡುವ ಮುನ್ನವೇ ಮುಚ್ಚಲಾಗಿದೆ. ಅಂದರೆ ವಾಟ್ಸಾಪ್ ಸ್ವತಃ ಈ ಖಾತೆಗಳಲ್ಲಿ ತಪ್ಪು ಚಟುವಟಿಕೆಯನ್ನು ಗಮನಿಸಿ ಅವರ ವಿರುದ್ಧ ಕ್ರಮ ಕೈಗೊಂಡಿದೆ.

16,500ಕ್ಕೂ ಹೆಚ್ಚು ದೂರು!

ಭಾರತದಲ್ಲಿ 50 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಈ ಮೆಸೇಜಿಂಗ್ ಅಪ್ಲಿಕೇಶನ್ ಫೆಬ್ರವರಿಯಲ್ಲಿ ದಾಖಲೆಯ 16,618 ದೂರುಗಳನ್ನು ಸ್ವೀಕರಿಸಿದೆ. ಈ ಪೈಕಿ 22 ಪ್ರಕರಣಗಳಲ್ಲಿ ಮಾತ್ರ ಕ್ರಮ ಕೈಗೊಳ್ಳಲಾಗಿದೆ. ಕ್ರಮ ಕೈಗೊಳ್ಳುವುದು ಎಂದರೆ ದೂರಿನ ಆಧಾರದ ಮೇಲೆ ವಾಟ್ಸಾಪ್, ಖಾತೆಯ ವಿರುದ್ಧ ಕ್ರಮ ಕೈಗೊಂಡಿದೆ ಎಂದರ್ಥ. ಉದಾಹರಣೆಗೆ ಖಾತೆಯನ್ನು ಮುಚ್ಚುವುದು ಅಥವಾ ಹಿಂದೆ ಮುಚ್ಚಿದ ಖಾತೆಯನ್ನು ಮರುಪ್ರಾರಂಭಿಸುವುದು.

ನಕಲಿ ಸುದ್ದಿಗಳು ಮತ್ತು ತಪ್ಪುಗಳನ್ನು ತಡೆಯಲು ಹಲವು ವಿಧಾನಗಳನ್ನು ಅಳವಡಿಸಿಕೊಳ್ಳುವುದಾಗಿ ಕಂಪನಿ ಹೇಳಿದೆ. ಇದಕ್ಕಾಗಿ ಸೆಕ್ಯೂರಿಟಿ ಫೀಚರ್‌ಗಳ ಜೊತೆಗೆ ಡೇಟಾ ವಿಜ್ಞಾನಿಗಳು, ಕಾನೂನು, ಆನ್‌ಲೈನ್ ಭದ್ರತೆ ಮತ್ತು ತಂತ್ರಜ್ಞಾನದ ತಜ್ಞರ ತಂಡವನ್ನು ಸಹ ಬಳಸಿಕೊಳ್ಳುತ್ತದೆ. ಇವರು ಖಾತೆಯನ್ನು ರಚಿಸಿದ ನಂತರ ಅದರ ಚಟುವಟಿಕೆಯ ಮೇಲೆ ಕಣ್ಣಿಡುತ್ತಾರೆ ಮತ್ತು ಬಳಕೆದಾರರ ದೂರುಗಳ ಮೇಲೆ ಕ್ರಮ ತೆಗೆದುಕೊಳ್ಳುತ್ತಾರೆ.

You Might Also Like

HEALTH TIPS : ಖಾಲಿ ಹೊಟ್ಟೆಯಲ್ಲಿ ತುಪ್ಪದಲ್ಲಿ ಹುರಿದ ಬೆಳ್ಳುಳ್ಳಿ ಹಲವು ಕಾಯಿಲೆಗಳಿಗೆ ಮನೆಮದ್ದು

BREAKING : ಬೆಂಗಳೂರಲ್ಲಿ ಘೋರ ಘಟನೆ : ‘KSRTC’ ಬಸ್ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸಾವು

SHOCKING : ವಾಹನ ತಪಾಸಣೆ ವೇಳೆ ಹಿಟ್ & ರನ್ : ಓರ್ವ ಮಹಿಳಾ ಕಾನ್ಸ್ಟೇಬಲ್ ಸಾವು, ಮೂವರಿಗೆ ಗಂಭೀರ ಗಾಯ.!

BIG NEWS: ಮಹಾ ಮಳೆ: ಸಿದ್ಧಾರ್ಥ್ ಗಾರ್ಡನ್ ಬಳಿ ಪ್ರವೇಶದ್ವಾರ ಕುಸಿದುಬಿದ್ದು ಮೂವರು ದುರ್ಮರಣ

BREAKING : ‘ಕಾಂತಾರ ಚಾಪ್ಟರ್ 1’ ಸಿನಿಮಾದ ಕಲಾವಿದ ಹೃದಯಾಘಾತದಿಂದ ಸಾವು.!

TAGGED:IndiaFebruaryaccountನಿಷೇಧಖಾತೆಕಾರಣWhatsappವಾಟ್ಸಾಪ್Ban
Share This Article
Facebook Copy Link Print

Latest News

HEALTH TIPS : ಖಾಲಿ ಹೊಟ್ಟೆಯಲ್ಲಿ ತುಪ್ಪದಲ್ಲಿ ಹುರಿದ ಬೆಳ್ಳುಳ್ಳಿ ಹಲವು ಕಾಯಿಲೆಗಳಿಗೆ ಮನೆಮದ್ದು
BREAKING : ಬೆಂಗಳೂರಲ್ಲಿ ಘೋರ ಘಟನೆ : ‘KSRTC’ ಬಸ್ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸಾವು
SHOCKING : ವಾಹನ ತಪಾಸಣೆ ವೇಳೆ ಹಿಟ್ & ರನ್ : ಓರ್ವ ಮಹಿಳಾ ಕಾನ್ಸ್ಟೇಬಲ್ ಸಾವು, ಮೂವರಿಗೆ ಗಂಭೀರ ಗಾಯ.!
BIG NEWS: ಮಹಾ ಮಳೆ: ಸಿದ್ಧಾರ್ಥ್ ಗಾರ್ಡನ್ ಬಳಿ ಪ್ರವೇಶದ್ವಾರ ಕುಸಿದುಬಿದ್ದು ಮೂವರು ದುರ್ಮರಣ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BIG NEWS : ರಾಜ್ಯದ ‘ಅರಣ್ಯ ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್ : ಮಾಸಿಕ 2000 ರೂ. ‘ಅಪಾಯ ಭತ್ಯೆ’ ನೀಡಲು ಸರ್ಕಾರ ಆದೇಶ.!
BREAKING : ನನ್ನಿಂದ ಶಿವಣ್ಣ ಮುಜುಗರ ಅನುಭವಿಸಬೇಕಾಯಿತು : ನಟ ಕಮಲ್ ಹಾಸನ್ ವಿಷಾದ.!
SHOCKING : ಆಗಾಗ ಮನೆ ಬಿಟ್ಟು ಹೋಗುತ್ತಿದ್ದ ಪತ್ನಿ : ಬೇಸತ್ತು ಬೆಂಗಳೂರಿನಲ್ಲಿ ಪತಿ ಆತ್ಮಹತ್ಯೆ.!
BREAKING : ‘ಮಡೆನೂರು ಮನು’ ಬೆನ್ನಲ್ಲೇ ಹಾಸ್ಯನಟ ಅಪ್ಪಣ್ಣ ವಿರುದ್ಧ ಗಂಭೀರ ಆರೋಪ ಮಾಡಿದ ಸಂತ್ರಸ್ತೆ.!

Automotive

ಸಾಲುಗಟ್ಟಿ ನಿಂತ ವಾಹನಗಳು: ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಮತ್ತೆ ಮುನ್ನೆಲೆಗೆ | Photo
ALERT : ಮಕ್ಕಳನ್ನು ಸ್ಕೂಟಿಯಲ್ಲಿ ಎದುರುಗಡೆ ಕೂರಿಸಿಕೊಳ್ಳುವ ಮುನ್ನ ಎಚ್ಚರ, ಈ ವೀಡಿಯೋ ನೋಡಿ |WATCH VIDEO
ಏರ್ ಇಂಡಿಯಾ ವಿಮಾನದಲ್ಲಿ ಎಸಿ ವೈಫಲ್ಯ: ಪ್ರಯಾಣಿಕರ ಪರದಾಟ | Watch Video

Entertainment

BREAKING NEWS: ಬಿಗ್ ಬಾಸ್ ಮಾಜಿ ಸ್ಪರ್ಧಿ ವಿನಯ್ ಹಾಗೂ ರಜತ್ ಕಿಶನ್ ಪೊಲೀಸ್ ವಶಕ್ಕೆ
ಕನ್ನಡಿಗರನ್ನು ಕೆಣಕಿದ ಗಾಯಕ ಸೋನು ನಿಗಮ್ ವಿರುದ್ಧ ಶಿವರಾಜ್ ಕೆ.ಆರ್. ಪೇಟೆ ಆಕ್ರೋಶ
ಬಿಕಿನಿ ಸಮರ: ದಿಶಾ ಪಟಾನಿ – ಕಿಯಾರಾ ಅಡ್ವಾಣಿ ನಡುವೆ ಹೆಚ್ಚಿದ ಹಾಟ್‌ ಟಾಪಿಕ್‌ | Watch

Sports

ಇಂಗ್ಲೆಂಡ್ ಸರಣಿಗೂ ಮುನ್ನವೇ ಭಾರತಕ್ಕೆ ‘ಪಂತ್’ ಆತಂಕ: ನೆಟ್ಸ್‌ನಲ್ಲಿ ಗಾಯ !
‘ಕ್ಯಾಪ್ಟನ್ ಕೂಲ್’ ಧೋನಿಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ: ಭಾರತಕ್ಕೆ ಹೆಮ್ಮೆ!
BIG NEWS: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಪಂದ್ಯಗಳು ಶಿಫ್ಟ್!

Special

ಎಲ್ಲರೂ ಇಷ್ಟಪಡುವ ಹೆಲ್ದಿ ಫುಡ್ ‘ಮೆಕ್ಕೆಜೋಳ’
ನಿಂಬೆಹಣ್ಣು – ಮೆಣಸಿನಕಾಯಿ ಕಟ್ಟುವುದರ ಹಿಂದಿದೆ ಈ ʼನಂಬಿಕೆʼ
ಮಗುವಿನ ಮಸಾಜ್ ಗೆ ಯಾವ ಋತುವಿನಲ್ಲಿ ಯಾವ ಎಣ್ಣೆ ಉತ್ತಮ ಗೊತ್ತಾ……?

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?