ಸಾಲದಿಂದ ಮುಕ್ತಿ ಬೇಕಾ……? ಅನುಸರಿಸಿ ಈ ಉಪಾಯ

ಕೆಲವೊಮ್ಮೆ ಕೈತುಂಬ ಹಣ ಸಂಪಾದನೆ ಮಾಡಿದ್ರೂ ಹಣ ಕೈನಲ್ಲಿ ನಿಲ್ಲುವುದಿಲ್ಲ. ಕೈಗೆ ಬಂದ ಹಣ ಖರ್ಚಾಗಿ ಹೋಗುತ್ತದೆ. ಇದಕ್ಕೆ ವಾಸ್ತು ದೋಷವೂ ಕಾರಣವಾಗುತ್ತದೆ. ಹಣ ಕೈನಲ್ಲಿ ಇರಬೇಕು, ಖರ್ಚು ಕಡಿಮೆಯಾಗಬೇಕೆಂದ್ರೆ ಕೆಲ ಉಪಾಯಗಳನ್ನು ಮಾಡಬೇಕು.

ಸಾಲ ಪಡೆದವರಿಗೆ ಸಾಲ ತೀರಿಸಲು ನಿಮ್ಮ ಬಳಿ ಪೂರ್ಣ ಹಣವಿಲ್ಲವೆಂದಾದ್ರೆ ನಿಮ್ಮ ಬಳಿಯಿರುವ ಅಲ್ಪ ಹಣವನ್ನು ಸಾಲ ನೀಡಿದವನಿಗೆ ಮಂಗಳವಾರ ವಾಪಸ್ ಮಾಡಿ. ಹೀಗೆ ಮಾಡಿದ್ರೆ ನೀವು ಆದಷ್ಟು ಬೇಗ ಸಾಲದಿಂದ ಮುಕ್ತಿ ಹೊಂದುತ್ತೀರಿ. ಇದ್ರ ಜೊತೆ ಲಕ್ಷ್ಮಿ ಕೃಪೆ ಸದಾ ನಿಮ್ಮ ಮೇಲಿರುತ್ತದೆ.

ಪದೇ ಪದೇ ಸಾಲ ಪಡೆಯುವ ಪರಿಸ್ಥಿತಿ ನಿರ್ಮಾಣವಾಗ್ತಿದ್ದರೆ ತಕ್ಷಣ ಮನೆ ನೀರಿನ ದಿಕ್ಕನ್ನು ಬದಲಿಸಿ. ಮನೆಯಲ್ಲಿ ನೀರಿನ ಟ್ಯಾಂಕ್ ಉತ್ತರಕ್ಕಿರಲಿ.

ಕನ್ನಡಿ ಕೂಡ ನಿಮ್ಮ ಸಾಲದ ಮೇಲೆ ನಿಯಂತ್ರಣ ಹೇರಬಲ್ಲದು. ಸಾಲವನ್ನು ತೀರಿಸಲು ಸಾಧ್ಯವಾಗ್ತಿಲ್ಲವೆಂದ್ರೆ ಮನೆ ಅಥವಾ ಕಚೇರಿಯಲ್ಲಿರುವ ಕನ್ನಡಿ ದಿಕ್ಕನ್ನು ಬದಲಿಸಿ. ಕನ್ನಡಿಯನ್ನು ಉತ್ತರ-ಪೂರ್ವ ದಿಕ್ಕಿನಲ್ಲಿಟ್ಟರೆ ಸಾಲದ ಹೊರೆ ಕಡಿಮೆಯಾಗುತ್ತದೆ. ಕನ್ನಡಿ ಭಾರ ಕಡಿಮೆಯಿರಲಿ, ಗಾತ್ರದಲ್ಲಿ ದೊಡ್ಡದಾಗಿರಲಿ. ಜೊತೆಗೆ ಸಿಂಧೂರ ಬಣ್ಣದ ಕನ್ನಡಿ ಸಿಕ್ಕರೆ ನಿಮ್ಮ ಅದೃಷ್ಟ ಬದಲಾದಂತೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read