ಉಪೇಂದ್ರ , ನೀವು ಎಂದಿಗೂ ಬುದ್ದಿವಂತರಾಗಿರಲಿಲ್ಲ, ಅದು ನಿಮ್ಮ ಭ್ರಮೆ : ನಟ ಚೇತನ್

ಬೆಂಗಳೂರು : ‘ಈ ದಡ್ ನನ್ ಮಗಂಗೆ ಇನ್ಮೆಲೆ ಬುದ್ಧಿವಂತ ಅಂದ್ರೆ ಆಷ್ಟೆ’ ಎಂಬ ನಟ ಉಪೇಂದ್ರ ಟ್ವೀಟ್ ಗೆ ನಟ ಚೇತನ್ ಪ್ರತಿಕ್ರಿಯೆ ನೀಡಿದ್ದಾರೆ.

ಉಪೇಂದ್ರ ಹೇಳ್ತಾರೆ: ‘ಈ ದಡ್ ನನ್ ಮಗಂಗೆ ಇನ್ಮೆಲೆ ಬುದ್ಧಿವಂತ ಅಂದ್ರೆ ಆಷ್ಟೆ’ ನಿಜ ಹೇಳಬೇಕೆಂದರೆ, ನೀವು ಎಂದಿಗೂ ಬುದ್ಧಿವತರಾಗಿರಲಿಲ್ಲ— ನಿಮ್ಮ ಅಸಂಬದ್ಧ ಕಲ್ಪನೆಯ ಭ್ರಮೆ ಅಷ್ಟೇ ಎಂದು ನಟ ಚೇತನ್ ಪ್ರತಿಕ್ರಿಯೆ ನೀಡಿದ್ದಾರೆ.

ಕಂಗನಾ ರನೌತ್ ಗೆ ಸಿಐಎಸ್ಎಫ್ ಸಿಬ್ಬಂದಿ ಕಪಾಳಮೋಕ್ಷ ಮಾಡಿದ ಕುರಿತು ಪ್ರತಿಕ್ರಿಯೆ ನೀಡಿರುವ ಅವರು ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕಂಗನಾ ರನೌತ್ ಗೆ ಸಿಐಎಸ್ಎಫ್ ಸಿಬ್ಬಂದಿ ಕಪಾಳಮೋಕ್ಷ ಮಾಡಿದ್ದಾರೆ. ರೈತರ ಪ್ರತಿಭಟನೆಯ ಸಮಯದಲ್ಲಿ ರನೌತ್ ಅವರ ಅನುಚಿತ ಹೇಳಿಕೆಗಳ ಬಗ್ಗೆ ನಿಲುವು ತೆಗೆದುಕೊಂಡ ಕಾನ್ಸ್ಟೇಬಲ್ ಅವರನ್ನು ನಾನು ಗೌರವಿಸುತ್ತೇನೆ ಆದರೆ ಕಪಾಳಮೋಕ್ಷ ಮಾಡುವ ಮೂಲಕ ಅವರ ಹೋರಾಟದ ಅಭಿವ್ಯಕ್ತಿಯ ವಿಧಾನವು ಸ್ವೀಕಾರಾರ್ಹವಲ್ಲ ಮತ್ತು ವೈಭವೀಕರಣಕ್ಕೆ ಅರ್ಹವಲ್ಲ ಎಂದು ನಾನು ಭಾವಿಸುತ್ತೇನೆ ಎಂದು ನಟ ಚೇತನ್ ಪ್ರತಿಕ್ರಿಯೆ ನೀಡಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read