ಮಲಗಿ ವಿರಮಿಸುತ್ತಿದ್ದ ಕಾರ್ಮಿಕನ ಎಚ್ಚರಗೊಳಿಸಲು ಮುಖದ ಮೇಲೆ ಮೂತ್ರ ವಿಸರ್ಜಿಸಿದ ಮಾಲೀಕ

ಲಖನೌ: ಲಖನೌದ ಚಂದೋಯಿಯ ಖೇಡಾ ಗ್ರಾಮದಲ್ಲಿ ಕಲ್ಲು ಗಣಿಯಲ್ಲಿ ಮಲಗಿ ವಿರಮಿಸುತ್ತಿದ್ದ ದಲಿತ ಕೂಲಿ ಕಾರ್ಮಿಕನ ಎಚ್ಚರಗೊಳಿಸಲು ಆತನ ಮುಖದ ಮೇಲೆ ಮಾಲೀಕ ಮೂತ್ರ ವಿಸರ್ಜನೆ ಮಾಡಿದ್ದಾನೆ.

ಭಾನುವಾರ ಮಧ್ಯಾಹ್ನ ಊಟದ ಬಳಿಕ ದಿನಗೂಲಿ ಕಾರ್ಮಿಕ ರಾಜಕುಮಾರ್ ರಾವತ್ ಮಲಗಿ ವಿರಮಿಸುತ್ತಿದ್ದಾಗ ಮಾಲೀಕ ಕೃತ್ಯವೆಸಗಿದ್ದಾನೆ. ರಾಜಕುಮಾರ್ ಅವರು ಕುಟುಂಬದ ಜೊತೆಗೆ ಕಲ್ಲುಗಣಿ ಸಮೀಪವೇ ವಾಸವಾಗಿದ್ದು, ಕೆಲಸದಿಂದ ದಣಿದಿದ್ದ ಅವರು ಮಧ್ಯಾಹ್ನ ಊಟದ ಬಳಿಕ ವಿರಮಿಸಿದ್ದಾರೆ. ಈ ವೇಳೆ ಕಲ್ಲು ಗಣಿಯ ಮಾಲೀಕ ಸಂಜಯ್ ಮೌರ್ಯ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿ ಕೃತ್ಯ ಚಿತ್ರೀಕರಿಸಿಕೊಂಡು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಂತ್ರಸ್ತನ ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read