ಭೋಪಾಲ್: ಮೋದಿ ಸರ್ಕಾರ ಸಹಕಾರ ಸಚಿವಾಲಯವನ್ನು ರಚಿಸಿದ ನಂತರ ಭಾರತದ ಸಹಕಾರಿ ವಲಯದಲ್ಲಿನ ಪರಿವರ್ತನಾತ್ಮಕ ಬದಲಾವಣೆಗಳಾಗಿವೆ ಎಂದು ಕೇಂದ್ರ ಗೃಹ ಮತ್ತು ಸಹಕಾರಿ ಸಚಿವ ಅಮಿತ್ ಶಾ ಶ್ಲಾಘಿಸಿದ್ದಾರೆ.
ಭೋಪಾಲ್ ನಲ್ಲಿ ನಡೆದ ರಾಜ್ಯ ಮಟ್ಟದ ಸಹಕಾರಿ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಸರ್ಕಾರವು ಗ್ರಾಮೀಣಾಭಿವೃದ್ಧಿ, ಕೃಷಿ ಮತ್ತು ಪಶುಸಂಗೋಪನೆಯನ್ನು ಏಕೀಕೃತ ವಿಧಾನದಡಿಯಲ್ಲಿ ಸಂಯೋಜಿಸಿದೆ. ಎಲ್ಲಾ ರಾಜ್ಯಗಳು ಮಾದರಿ ಬೈಲಾಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಹಕಾರಿ ನಿಯಮಗಳನ್ನು ಪ್ರಮಾಣೀಕರಿಸುವಲ್ಲಿ ಕೇಂದ್ರ ಸರ್ಕಾರದ ಪಾತ್ರ ವಹಿಸಿದೆ ಎಂದು ಹೇಳಿದ್ದಾರೆ.
ಈ ಬೆಳವಣಿಗೆ ಸಹಕಾರ ವಲಯವನ್ನು ಪುನರುಜ್ಜೀವನಗೊಳಿಸಿದೆ. ಸಹಕಾರಿ ಬ್ಯಾಂಕುಗಳು ಈಗ ಅಲ್ಪಾವಧಿಯ ಕೃಷಿ ಹಣಕಾಸಿನ ಆಚೆಗೆ ವಿಸ್ತರಿಸುತ್ತಿವೆ. ಈಗ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುವ ಪಿಎಸಿಎಸ್ ಗಳು ಬೆಳವಣಿಗೆ ಹೊಂದುತ್ತಿವೆ. ಔಷಧಿಗಳ ಮಾರಾಟ, ನೀರು ವಿತರಣೆ ಸೇರಿದಂತೆ ಕೃಷಿ ಹಣಕಾಸಿನ ಆಚೆಗೆ ಸೇವೆಗಳನ್ನು ನೀಡುತ್ತವೆ. ಬೀಜ, ಸಾವಯವ ಮತ್ತು ರಫ್ತು ಸಹಕಾರಿ ಸಂಘಗಳ ಮೂಲಕ, ರೈತರು ನ್ಯಾಯಯುತ ಬೆಲೆಗಳನ್ನು ಮತ್ತು ಅವರ ಬ್ಯಾಂಕ್ ಖಾತೆಗಳಿಗೆ ನೇರ ಪಾವತಿಗಳನ್ನು ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
2.5 ಎಕರೆಗಳಷ್ಟು ಕಡಿಮೆ ಭೂಮಿಯನ್ನು ಹೊಂದಿರುವ ಸಣ್ಣ ಪ್ರಮಾಣದ ರೈತರು ಈಗ ಬೀಜಗಳನ್ನು ಉತ್ಪಾದಿಸಲು ಸಾಧ್ಯವಾಗುತ್ತದೆ. ಇದನ್ನು ಹೊಸದಾಗಿ ಪ್ರಾರಂಭಿಸಲಾದ ‘ಬೀಜ ಸಹಕಾರಿ’ಯು ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಬೆಲೆಗಳನ್ನು ಖಚಿತಪಡಿಸಿಕೊಳ್ಳಲು ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಮಧ್ಯಪ್ರದೇಶ ಸಹಕಾರಿ ಸಚಿವ ವಿಶ್ವಾಸ್ ಸಾರಂಗ್, ಪಶುಸಂಗೋಪನೆ ಮತ್ತು ಡೈರಿ ಅಭಿವೃದ್ಧಿ ಸಚಿವ ಲಖನ್ ಪಟೇಲ್ ಹಾಗೂ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ ಮತ್ತು ಮಧ್ಯಪ್ರದೇಶದ ಸಹಕಾರಿ, ಪಶುಸಂಗೋಪನೆ ಮತ್ತು ಡೈರಿ ಇಲಾಖೆಯ ಅಧಿಕಾರಿಗಳು ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.