ಶಿವಮೊಗ್ಗ ರವೀಂದ್ರ ನಗರ ಗಣಪತಿ ದೇವಸ್ಥಾನದ ಅಧ್ಯಕ್ಷರಾಗಿ ಎಂ. ಉಮಾಶಂಕರ್ ಉಪಾಧ್ಯ ಆಯ್ಕೆ

ಶಿವಮೊಗ್ಗ ನಗರದ ರವೀಂದ್ರ ನಗರ ಶ್ರೀ ಪ್ರಸನ್ನ ಗಣಪತಿ ಬಲಮುರಿ ದೇವಸ್ಥಾನ ಅಭಿವೃದ್ಧಿ ದತ್ತಿ (ರಿ) ಅಧ್ಯಕ್ಷರಾಗಿ ಎಂ. ಉಮಾಶಂಕರ್ ಉಪಾಧ್ಯ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಎಸ್‍.ಕೆ. ಮರಿಯಪ್ಪ, ಉಪಾಧ್ಯಕ್ಷರುಗಳಾಗಿ ಡಾ. ಉದಯ ವಿ. ರಾವ್, ಎ.ಜಿ. ಸುಧೀರ್, ಕಾರ್ಯದರ್ಶಿಯಾಗಿ ಎನ್. ಉಮಾಪತಿ, ಸಹ ಕಾರ್ಯದರ್ಶಿಯಾಗಿ ಎಚ್. ತೇಜ್ ಕುಮಾರ್ ಹಾಗೂ ಖಜಾಂಚಿಯಾಗಿ ಎಸ್.ಟಿ. ಶ್ರೀನಿವಾಸ್ ಅವರುಗಳನ್ನು ಆಯ್ಕೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಧರ್ಮದರ್ಶಿಗಳಾದ ಅಶ್ವಥನಾರಾಯಣ ಶೆಟ್ಟಿ, ಎಸ್.ಕೆ. ಶ್ರೀನಿವಾಸ್, ರುಕ್ಮಿಣಿ ವೇದವ್ಯಾಸ್, ಕೆ. ಲಕ್ಷ್ಮಣ, ಸಿ. ಗುರುದೀಪ್ ಮೊದಲಾದವರು ಹಾಜರಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read