‘ನಾಣ್ಯ’ ನದಿಗೆಸೆಯುವುದರ ಹಿಂದಿದೆ ಈ ವೈಜ್ಞಾನಿಕ ಕಾರಣ

ಪ್ರಯಾಣ ಸಂದರ್ಭಗಳಲ್ಲಿ ನದಿ ಎದುರಾದಾಗ ನಾಣ್ಯವನ್ನು ಎಸೆಯುವ ಪದ್ದತಿ ಆನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ.

ನದಿಗೆ ಕಟ್ಟಲಾಗಿರುವ ಸೇತುವೆ ಮೇಲೆ ರೈಲು ಹೋಗುವಾಗ ಈಗಲೂ ಅನೇಕರು ನಾಣ್ಯವನ್ನು ನದಿಗೆ ಎಸೆಯುತ್ತಾರೆ. ಆದರೆ ಇದರ ಹಿಂದಿರುವ ಕಾರಣ ಏನು ಎಂಬುದನ್ನು ತಿಳಿಯೋಣ ಬನ್ನಿ.

ನಾಣ್ಯವನ್ನು ನದಿಗೆ ಎಸೆದರೆ ಅದೃಷ್ಟ ತರುತ್ತದೆಂಬ ನಂಬಿಕೆ ಹಲವರಲ್ಲಿದೆ. ಆದರೆ ಇದರ ಹಿಂದೆ ಮತ್ತೊಂದು ವೈಜ್ಞಾನಿಕ ಕಾರಣವೂ ಇದೆ.

ಈಗ ನಾಣ್ಯಗಳನ್ನು ಸ್ಟೀಲ್ ನಲ್ಲಿ ತಯಾರಿಸಲಾಗುತ್ತಿದೆ. ಆದರೆ ಪ್ರಾಚೀನ ಕಾಲದ ನಾಣ್ಯಗಳು ತಾಮ್ರದಿಂದ ತಯಾರಿಸಲ್ಪಡುತ್ತಿದ್ದವು. ನೀರಿನಲ್ಲಿ ತಾಮ್ರವಿದ್ದ ವೇಳೆ ಧೂಳಿನ ಕಣಗಳು ತಳಭಾಗಕ್ಕೆ ಸೆಳೆಯಲ್ಪಡುತ್ತದಲ್ಲದೇ ಮೇಲೆ ಸ್ವಚ್ಚ ಕುಡಿಯುವ ನೀರು ಸಿಗುತ್ತದೆ. ಅಷ್ಟೇ ಅಲ್ಲ ಇಂತಹ ಶುದ್ದ ನೀರು ಆರೋಗ್ಯಕ್ಕೂ ಒಳ್ಳೆಯದು. ಈ ಕಾರಣಕ್ಕಾಗಿ ಆನಾದಿ ಕಾಲದಿಂದಲೂ ನಾಣ್ಯಗಳನ್ನು ನದಿಗೆ ಎಸೆಯಲಾಗುತ್ತಿತ್ತು ಎನ್ನಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read