ವಯಸ್ಸು 30 ದಾಟಿದ್ರೂ ಮದ್ವೆ ಆಗಲು ‘ಕನ್ಯೆ’ ಸಿಗ್ತಿಲ್ಲ ಎಂದು ಮಾದಪ್ಪನ ಮೊರೆ ಹೋದ ಹಳ್ಳಿ ಹೈಕಳು

ಚಾಮರಾಜನಗರ : ಮದುವೆಗೆ ‘ಕನ್ಯೆ’ ಸಿಗ್ತಿಲ್ಲ ಎಂದು ಯುವಕರ ತಂಡ ಮಲೆ ಮಹಾದೇಶ್ವರನ ಮೊರೆ ಹೋಗಿದ್ದು, ಹಲವು ಜಿಲ್ಲೆಗಳಿಂದ ಯುವಕರು ಪಾದಯಾತ್ರೆ ಕೈಗೊಳ್ಳುತ್ತಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಾನಕ್ಕೆ ಕಂಕಣ ಭಾಗ್ಯ ಕರುಣಿಸುವಂತೆ ಕೋರಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. 30 ವರ್ಷ ದಾಟಿದರೂ ಮದುವೆ ಆಗದ ಹಿನ್ನೆಲೆಯಲ್ಲಿ ನೊಂದ ಈ ಬ್ರಹ್ಮಚಾರಿ ಯುವಕರು ದೇವರ ಮೊರೆ ಹೋಗುತ್ತಿದ್ದಾರೆ.

ಗ್ರಾಮೀಣ ಪ್ರದೇಶದ ಅದರಲ್ಲೂ ಕೃಷಿ ಕುಟುಂಬದಲ್ಲಿರುವ ಯುವಕರು ತಮಗೆ ಹೆಣ್ಣು ಸಿಗಲಿಲ್ಲವೆಂದು…ಬೇಗ ಕಂಕಣ ಭಾಗ್ಯ ಕರುಣಿಸುವಂತೆ ಮಾದಪ್ಪನಿಗೆ ಮೊರೆಯಿಡುತ್ತಿದ್ದಾರೆ. ಕೆಲವರು 200-250 ಕಿಮೀ ಪಾದಯಾತ್ರೆ ಮೂಲಕ ಮಾದಪ್ಪನ ಬೆಟ್ಟಕ್ಕೆ ಬಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read