ಮಳೆ ಕೊರತೆಯಾಗಿದ್ದ ರಾಜ್ಯದಲ್ಲೀಗ ಭಾರಿ ವರ್ಷಧಾರೆ: ಜುಲೈನಲ್ಲಿ ವಾಡಿಕೆಗಿಂತ ಶೇ. 12ರಷ್ಟು ಅಧಿಕ ಮಳೆ

ಬೆಂಗಳೂರು: ಮಳೆ ಕೊರತೆ ಅನುಭವಿಸಿದ್ದ ರಾಜ್ಯದಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಜುಲೈ ತಿಂಗಳಿನಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಶೇಕಡ 12ರಷ್ಟು ಅಧಿಕ ಮಳೆಯಾಗಿದ್ದು, ಮಳೆಯ ಕೊರತೆ ಕಡಿಮೆಯಾಗಿದೆ.

ಜೂನ್ 1ರಿಂದ ಜುಲೈ 22 ರವರೆಗೆ ದಕ್ಷಿಣ ಒಳನಾಡು 120 ಮಿ.ಮೀ., ಉತ್ತರ ಒಳನಾಡು 182 ಮಿ.ಮೀ., ಮಲೆನಾಡಿನಲ್ಲಿ 789 ಮಿ.ಮೀ., ಕರಾವಳಿಯಲ್ಲಿ 1652 ಮಿ.ಮೀ. ಮಳೆ ಸೇರಿ ಒಟ್ಟು ರಾಜ್ಯಾದ್ಯಂತ 392 ಮಿ.ಮೀ. ಮಳೆಯಾಗಬೇಕಿತ್ತು. ಕೇವಲ 302 ಮಿ.ಮೀ. ಮಳೆಯಾಗಿದ್ದು ಶೇಕಡ 22ರಷ್ಟು ಮಳೆ ಕೊರತೆ ಆಗಿದೆ.

ಜುಲೈ 1ರಿಂದ ಜುಲೈ 22 ರವರೆಗೆ ವಾಡಿಕೆಯಂತೆ 192 ಮಿ.ಮೀ. ಮಳೆಯಾಗಬೇಕಿದ್ದು 215 ಮಿ.ಮೀ. ಮಳೆಯಾಗಿದೆ. ವಾಡಿಕೆಗಿಂತ ಶೇಕಡ 12ರಷ್ಟು ಹೆಚ್ಚಿನ ಮಳೆಯಾಗಿದೆ. ಮಲೆನಾಡು, ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಕಳೆದ ವಾರದಿಂದ ಮಳೆ ಹೆಚ್ಚಾಗಿದ್ದು, ವಾಡಿಕೆಗಿಂತ ಶೇಕಡ 20ರಷ್ಟು ಹೆಚ್ಚಿನ ಮಳೆಯಾಗಿದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read