‘ಲಿಂಬೆಹಣ್ಣು’ ಹಿಡಿದುಕೊಂಡೇ ಭಾಷಣ ಮಾಡಿ ಅಚ್ಚರಿ ಮೂಡಿಸಿದ ‘CM ಸಿದ್ದರಾಮಯ್ಯ’ ..!

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಇಂದು ಲಿಂಬೆಹಣ್ಣು ಹಿಡಿದುಕೊಂಡು ಭಾಷಣ ಮಾಡಿದ್ದು, ಹಲವು ಚರ್ಚೆಗಳಿಗೆ ಕಾರಣವಾಗಿದೆ. ಹಾಗೂ ಸಿಎಂ ಸಿದ್ದರಾಮಯ್ಯರ ನಡೆ ಬಹಳ ಅಚ್ಚರಿ ಮೂಡಿಸಿದೆ.

ಮೆಜೆಸ್ಟಿಕ್ ಸಮೀಪವಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಳಕ್ಕೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ನಂತರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು.

ಈ ವೇಳೆ ಅರ್ಚಕರು ಕೊಟ್ಟ ಲಿಂಬೆ ಹಣ್ಣು ಹಿಡಿದು ವೇದಿಕೆ ಹತ್ತಿದ ಸಿಎಂ ಸಿದ್ದರಾಮಯ್ಯ ಭಾಷಣ ಮುಗಿಯುವರೆಗೂ ಲಿಂಬೆಹಣ್ಣನ್ನು ಕೈ ಬಿಡಲಿಲ್ಲ. ಈ ವಿಚಾರ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಸಿಎಂ ಸಿದ್ದರಾಮಯ್ಯ ಮೂಢನಂಬಿಕೆಯಿಂದ ಲಿಂಬೆಹಣ್ಣು ಇಟ್ಟುಕೊಂಡ್ರಾ..? ಅಥವಾ ಅಚಾನಕ್ ಆಗಿ ಕೈಯಲ್ಲಿ ಲಿಂಬೆಹಣ್ಣು ಇಟ್ಟುಕೊಂಡ್ರಾ ಎಂಬ ಚರ್ಚೆ ಶುರುವಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read