ಕಲಬುರಗಿ: ನಿಧನರಾಗಿದ್ದ ತಾಯಿಯ ಖಾತೆಗೆ ಜಮಾ ಆಗಿದ್ದ ಗೃಹಲಕ್ಷ್ಮಿ ಯೋಜನೆ ಹಣವನ್ನು ಅವರ ಪುತ್ರ ಇಲಾಖೆಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಖಜೂರಿ ಗ್ರಾಮದ ಸುಮನಾಬಾಯಿ ವಾಸುದೇವ ಕುಲಕರ್ಣಿ ಅವರು ಗೃಹಲಕ್ಷ್ಮಿ ಯೋಜನೆ ಫಲಾನುಭವಿಯಾಗಿದ್ದರು. ಮೂರು ತಿಂಗಳ ಹಿಂದೆ ಅವರು ಮೃತಪಟ್ಟಿದ್ದರು.
2025ರ ಫೆಬ್ರವರಿ 23ರಂದು ಅನಾರೋಗ್ಯದಿಂದ ಸುಮನಾಬಾಯಿ ಮೃತಪಟ್ಟಿದ್ದು, ನಂತರ ಅವರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಪಾವತಿಸದಂತೆ ಅವರ ಪುತ್ರ ಮಾಣಿಕ ಕುಲಕರ್ಣಿ ಇಲಾಖೆಗೆ ಪತ್ರ ಬರೆದಿದ್ದಾರೆ. ಆದರೂ ಮೇ 5ರಂದು ಡಿಸೆಂಬರ್ ಮತ್ತು ಜನವರಿ ತಿಂಗಳ ಗೃಹಲಕ್ಷ್ಮಿ ಯೋಜನೆ ಹಣವನ್ನು ಸುಮನಾಬಾಯಿ ಅವರ ಖಾತೆಗೆ ಜಮಾ ಮಾಡಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಮಾಣಿಕ ಕುಲಕರ್ಣಿ ಬುಧವಾರ ಸರ್ಕಾರದ ಹೆಸರಲ್ಲಿ ಡಿಡಿ ತೆಗೆಸಿ ಎಸಿಡಿಪಿಒ ಚಂದ್ರಕಾಂತ ಹಿರೇಮಠ ಅವರಿಗೆ ಸಲ್ಲಿಸಿ ಪ್ರಾಮಾಣಿಕತೆ ಮೆರೆದ್ದಾರೆ.