ಪ್ರಮುಖ ಐತಿಹಾಸಿಕ ದೇವಾಲಯ ʼಪುರಿ ಜಗನ್ನಾಥʼನ ಕ್ಷೇತ್ರ

ಒರಿಸ್ಸಾ ರಾಜ್ಯದ ಪುರಿಯಲ್ಲಿರುವ ಜಗನ್ನಾಥ ದೇವಾಲಯ, ವಿಷ್ಣುವಿಗೆ ಸಮರ್ಪಿತವಾದ ಪ್ರಮುಖ ಐತಿಹಾಸಿಕ ದೇವಾಲಯ. ಪ್ರಸ್ತುತ ನಾವು ಕಾಣುವ ದೇವಾಲಯವನ್ನು 10ನೇ ಶತಮಾನದಲ್ಲಿ ಪುನರ್ ನಿರ್ಮಿಸಲಾಯಿತು.

ಈ ದೇಗುಲದ ವಾರ್ಷಿಕ ರಥಯಾತ್ರೆ ಹೆಸರುವಾಸಿಯಾದುದು. ಮೂರು ದೇವತೆಗಳನ್ನು ಬೃಹತ್ ಮತ್ತು ವಿಸ್ತಾರವಾಗಿ ಅಲಂಕರಿಸಿದ ದೇವಾಲಯದ ರಥದ ಮೇಲೆ ಎಳೆಯುತ್ತಾರೆ. ಮಧ್ವಾಚಾರ್ಯರು ಸೇರಿದಂತೆ ಗುರು ನಾನಕ್, ಕಬೀರ್, ತುಲಸಿದಾಸರು, ರಾಮಾನುಜಾಚಾರ್ಯರು ಮೊದಲಾದವರು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದರು ಎಂಬುದಕ್ಕೆ ಪುರಾವೆಗಳಿವೆ. ಆದಿಶಂಕರ ಇಲ್ಲಿ ಗೋವರ್ಧನ ಮಠ ಸ್ಥಾಪಿಸಿದರು.

ಬೃಹತ್ ದೇಗುಲದ ಸಂಕೀರ್ಣ 4 ಲಕ್ಷ ಚದರ ಅಡಿ ಜಾಗವನ್ನು ಒಳಗೊಂಡಿದೆ. ದೇವಾಲಯ ಎಲ್ಲಾ ದಿಕ್ಕುಗಳಲ್ಲಿ 4 ಪ್ರವೇಶಗಳನ್ನು ಹೊಂದಿದೆ. ಬೆಳಿಗ್ಗೆ 9ರಿಂದ ರಾತ್ರಿ 12ರವರೆಗೆ ತೆರೆದಿರುತ್ತದೆ.

ಜಗನ್ನಾಥ ಅಂದರೆ ಕೃಷ್ಣ, ಬಲಭದ್ರ ಅಂದರೆ ಬಲರಾಮ ಮತ್ತು ಸುಭದ್ರಾ ಇಲ್ಲಿ ಪೂಜಿಸಲ್ಪಡುವ ಮೂವರು ದೇವತೆಗಳು. ಈ ದೇವರ ಪ್ರತಿಮೆಗಳನ್ನು ದಾರು ಎಂದು ಕರೆಯಲ್ಪಡುವ ಪವಿತ್ರ ಬೇವಿನ ಮರದ ತುಂಡುಗಳಿಂದ ಕೆತ್ತಲಾಗಿದೆ. ಇದನ್ನು ರತ್ನ ಖಚಿತ ಆಸನದ ಮೇಲೆ ಕೂರಿಸಲಾಗುತ್ತದೆ. ಋತುಗಳಿಗೆ ಅನುಗುಣವಾಗಿ ದೇವರನ್ನು ವಿವಿಧ ಬಟ್ಟೆ ಮತ್ತು ಅಭರಣಗಳಿಂದ ಅಲಂಕರಿಸಲಾಗುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read