SHOCKING: ಪತಿ ಮೃತಪಟ್ಟ ಬಳಿಕ ಆಸ್ಪತ್ರೆ ಬೆಡ್ ಮೇಲಿನ ರಕ್ತ ಒರೆಸಲು ಗರ್ಭಿಣಿ ಪತ್ನಿಗೆ ಒತ್ತಾಯ

ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟ ಬಳಿಕ ಹಾಸಿಗೆ ಮೇಲಿನ ರಕ್ತದ ಕಲೆ ಒರೆಸುವಂತೆ ಐದು ತಿಂಗಳ ಗರ್ಭಿಣಿ ಪತ್ನಿಗೆ ಆಸ್ಪತ್ರೆ ಸಿಬ್ಬಂದಿ ಒತ್ತಾಯಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಗರ್ಭಿಣಿ ಹಾಸಿಗೆ ಮೇಲಿನ ರಕ್ತವನ್ನು ಬಟ್ಟೆಯಿಂದ ಒರೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ದಿಂಡೋರಿ ಜಿಲ್ಲೆಯ ಲಾಲ್ ಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಗಾಯಗೊಂಡ ಶಿವರಾಜ್ ಮತ್ತು ರಾಮರಾಜ್ ಅವರನ್ನು ತುರ್ತು ಚಿಕಿತ್ಸೆಗಾಗಿ ಗಡಸರೈ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಶಿವರಾಜ್ ಮೃತಪಟ್ಟಿದ್ದಾರೆ.

ಶಿವರಾಜ್ ಗರ್ಭಿಣಿ ಪತ್ನಿ ರೋಶ್ನಿಗೆ ಆಸ್ಪತ್ರೆಯ ಬೆಡ್ ಮೇಲಿದ್ದ ರಕ್ತವನ್ನು ಒರೆಸುವಂತೆ ಆಸ್ಪತ್ರೆ ಸಿಬ್ಬಂದಿ ಬಲವಂತ ಮಾಡಿದ್ದಾರೆ ಎನ್ನಲಾಗಿದೆ.

ಪ್ರತಿಕ್ರಿಯೆ ನೀಡಿದ ಗಡಸರೈ ಆರೋಗ್ಯ ಕೇಂದ್ರದ ಡಾ. ಚಂದ್ರಶೇಖರ್ ಟೇಕಂ, ಈ ಸಮಯದಲ್ಲಿ ಆಸ್ಪತ್ತೆಯ ಸಿಬ್ಬಂದಿ ಇದ್ದರೂ ಮಹಿಳೆ ತನ್ನ ಗಂಡನ ಗಾಯಗಳ ಪ್ರಮಾಣ ತೋರಿಸಲು ರಕ್ತದ ಕಲೆಯ ಬಟ್ಟೆಯನ್ನು ಸಾಕ್ಷಿಯಾಗಿ ಇರಿಸಿಕೊಳ್ಳಲು ವಿನಂತಿಸಿ ಆಕೆಯೇ ಸ್ವಚ್ಛಗೊಳಿಸಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಬೆಡ್ ಒರೆಸುವಂತೆ ಹೇಳಿಲ್ಲ. ಕುಟುಂಬದಿಂದಲೂ ಈ ಬಗ್ಗೆ ಯಾವುದೇ ಔಪಚಾರಿಕ ದೂರು ಸ್ವೀಕರಿಸಿಲ್ಲ ಎಂದು ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read