SHOCKING: ರಾಜ್ಯದಲ್ಲಿ ತಿಂಗಳಿಗೆ 40 ಸಾವಿರ ಜನರಿಗೆ ನಾಯಿ ಕಡಿತ…!: ಆರೋಗ್ಯ ಇಲಾಖೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಪ್ರತಿ ತಿಂಗಳು ಸುಮಾರು 40,000 ನಾಯಿ ಕಡಿತ ಪ್ರಕರಣಗಳು ವರದಿಯಾಗುತ್ತಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ನಾಯಿ ಕಡಿತದಿಂದ ಜೀವ ಉಳಿಸುವ ಆ್ಯಂಟಿ ರೇಬಿಸ್ ಲಸಿಕೆ(ಎ.ಆರ್.ವಿ.) ಮತ್ತು ರೇಬಿಸ್ ಇಮ್ಯುನೋಗ್ಲೋಬುಲಿನ್ ಸಾಕಷ್ಟು ದಾಸ್ತಾನು ಇದೆ. ನಾಯಿ ಕಡಿತವನ್ನು ನೋಟೇಬಲ್ ಡಿಸೀಸ್ ಎಂದು ಪರಿಗಣಿಸಲಾಗಿದ್ದು, ರಾಜ್ಯದಲ್ಲಿ ಎಲ್ಲೇ ನಾಯಿ ಕಡಿತ ವರದಿಯಾದರೂ ಸಂಬಂಧಿಸಿದ ಆಸ್ಪತ್ರೆಗಳು ಆರೋಗ್ಯ ಇಲಾಖೆಗೆ ವರದಿ ನೀಡಬೇಕಿದೆ.

ರಾಜ್ಯದ ಔಷಧ ತಂತ್ರಾಂಶದ ಮಾಹಿತಿ ಪ್ರಕಾರ, ರಾಜ್ಯದಾತ್ಯಂತ ಆಸ್ಪತ್ರೆಗಳಲ್ಲಿ 1,45,684 ವೈಲ್ಸ್ ಆ್ಯಂಟಿ ರೇಬಿಸ್ ಲಸಿಕೆ ಲಭ್ಯವಿದೆ.

ರಾಜ್ಯ ವೈದ್ಯ ಸರಬರಾಜು ನಿಗಮ ನಿಯಮಿತ ಸಂಸ್ಥೆಯು ಎರಡು ವಾರಗಳಲ್ಲಿ 89,386 ವೈಲ್ಸ್ ರೇಬಿಸ್ ಇಮ್ಯುನೋಗ್ಲೋಬುಲಿನ್ ಪೂರೈಕೆಗೆ ಅಧಿಕೃತ ಆದೇಶ ಹೊರಡಿಸಿದೆ. ಎರಡೂ ಔಷಧಗಳು ರಾಜ್ಯದ ಆಸ್ಪತ್ರೆಗಳಲ್ಲಿ ಮುಂದಿನ ಮೂರು ತಿಂಗಳವರೆಗೆ ಯಾವುದೇ ಕೊರತೆ ಇರುವುದಿಲ್ಲ. ಈ ಔಷಧಗಳ ಗರಿಷ್ಠ ಬಳಕೆ ಮತ್ತು ನಿರಂತರ ಪೂರೈಕೆಗೆ ಈಗಾಗಲೇ ಜಿಲ್ಲಾ ಜಿಲ್ಲೆಗಳಿಗೆ ಜ್ಞಾಪನಾ ಪತ್ರ ಹೊರಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read