BIG NEWS : ಶಿವಾಜಿ ಪ್ರತಿಮೆ ತೆರವು ವಿವಾದ : ಇಂದು ಬಾಗಲಕೋಟೆ ಬಂದ್ ಗೆ ಕರೆ

ಬಾಗಲಕೋಟೆ : ಶಿವಾಜಿ ಪ್ರತಿಮೆ ತೆರವು ವಿವಾದ ಹಿನ್ನೆಲೆ ಇಂದು ಬಾಗಲಕೋಟೆ ( Bagalakote)  ಬಂದ್ ಗೆ ಕರೆ ನೀಡಲಾಗಿದೆ.

ಬಿಜೆಪಿ ಹಾಗೂ ಹಿಂದೂ ಜಾಗರಣ ವೇದಿಕೆಯಿಂದ ಬಂದ್ ಗೆ ಕರೆ ಕೊಟ್ಟಿದ್ದು, ಕೆಲವು ವ್ಯಾಪಾರಿಗಳು , ಕೆಲವು ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿದೆ. ಕೆಲವು ಕಡೆ ಅಂಗಡಿಗಳು ಎಂದಿನಂತೆ ಓಪನ್ ಆಗಿದೆ.
ನಗರದ ಸೋನಾರ ಬಡಾವಣೆಯಲ್ಲಿರುವ ಅನುಮತಿ ಇಲ್ಲದೇ ಶಿವಾಜಿ ಪುತ್ಥಳಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಬುಧವಾರ ಪುತ್ಥಳಿಯನ್ನು ಪೊಲೀಸರ ಬಿಗಿ ಭದ್ರತೆಯಲ್ಲಿ ರಾತ್ರಿ ತೆರವುಗೊಳಿಸಲಾಗಿತ್ತು.

ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಆದೇಶದ ಮೇರೆಗೆ ಟಾಟಾ ಏಸ್ ವಾಹನದಲ್ಲಿ ಶಿವಾಜಿ ಪ್ರತಿಮೆಯನ್ನು ನಗರಸಭೆ ಸಿಬ್ಬಂದಿ ಸಾಗಿಸಿದ್ದಾರೆ. ಈ ವೇಳೆ ವಿರೋಧಿಸಿ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆ ಇಂದು ಬಾಗಲಕೋಟೆ ಬಂದ್ ಗೆ ಕರೆ ನೀಡಲಾಗಿದೆ

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read