ಶಾಲಾ ಮಕ್ಕಳಿಗೆ ಸಿಹಿ ಸುದ್ದಿ: ರಾಜ್ಯದ ಎಲ್ಲಾ ಆಶ್ರಮ ಶಾಲೆ ಮಕ್ಕಳಿಗೂ ‘ಕ್ಷೀರಭಾಗ್ಯ’ ಹಾಲು ವಿತರಣೆಗೆ ಸಿಎಂ ಸೂಚನೆ

ಮೈಸೂರು: ರಾಜ್ಯದ ಎಲ್ಲಾ ಆಶ್ರಮ ಶಾಲೆ ಮಕ್ಕಳಿಗೂ ಹಾಲು ವಿತರಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಪಿ.ಎಂ. ಪ್ರಸನ್ನ ನೇತೃತ್ವದ ನಿಯೋಗ ಭಾನುವಾರ ಸಿಎಂ ಅವರನ್ನು ಭೇಟಿ ಮಾಡಿ ಆಶ್ರಮ ಶಾಲೆ ಮಕ್ಕಳಿಗೂ ಕ್ಷೀರ ಭಾಗ್ಯ ಯೋಜನೆ ವಿಸ್ತರಿಸಲು ಮನವಿ ಮಾಡಿದೆ.

ಈ ಮನವಿಗೆ ಸ್ಪಂದಿಸಿದ ಸಿಎಂ, ಆಶ್ರಮ ಶಾಲೆ ಮಕ್ಕಳಿಗೆ ಏಕೆ ಹಾಲು ಕೊಡುತ್ತಿಲ್ಲ. ತಕ್ಷಣವೇ ಎಲ್ಲಾ ಆಶ್ರಮ ಶಾಲೆ ಮಕ್ಕಳಿಗೂ ಹಾಲು ನೀಡಲು ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರಿಗೆ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read