ಮದುವೆ ನಂತರ ಭಯಾನಕ ದರೋಡೆ: ₹14.5 ಲಕ್ಷ ಕರೆನ್ಸಿ ಹಾರ ಗನ್‌ಪಾಯಿಂಟ್‌ನಲ್ಲಿ ಲೂಟಿ | Watch

ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಭಿವಾಡಿಯ ಚೂಹರ್‌ಪುರ ಗ್ರಾಮದಲ್ಲಿ ಮದುವೆ ಸಮಾರಂಭ ಮುಗಿಸಿ ಹಿಂದಿರುಗುತ್ತಿದ್ದಾಗ, ಬರೋಬ್ಬರಿ ₹14.5 ಲಕ್ಷ ಮೌಲ್ಯದ ಕರೆನ್ಸಿ ನೋಟುಗಳ ಹಾರವನ್ನು ಗನ್‌ಪಾಯಿಂಟ್‌ನಲ್ಲಿ ಲೂಟಿ ಮಾಡಲಾಗಿದೆ. ಈ ಆಘಾತಕಾರಿ ಘಟನೆ ಜೂನ್ 1 ರಂದು ಚೋಪಾಂಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವರದಿಯ ಪ್ರಕಾರ, ವರನ ಸಂಬಂಧಿಕರಾದ ಮಿಸ್ಟರ್ ಷಾದ್ ಎಂಬುವರು ಹರಿಯಾಣದಿಂದ ಈ ದುಬಾರಿ ಹಾರವನ್ನು ಮದುವೆಗಾಗಿ ತಂದಿದ್ದರು. ಮದುವೆ ಮುಗಿದ ನಂತರ, ಹಾರವನ್ನು ಬೈಕ್‌ನಲ್ಲಿ ಹಿಂದಿರುಗಿಸುತ್ತಿದ್ದಾಗ ಈ ಘಟನೆ ನಡೆದಿದೆ.

ಸಂತ್ರಸ್ತ ಷಾದ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ಕ್ರೆಟಾ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳ ಗುಂಪೊಂದು ತಮ್ಮ ವಾಹನಕ್ಕೆ ಡಿಕ್ಕಿ ಹೊಡೆದು, ಗನ್‌ಪಾಯಿಂಟ್‌ನಲ್ಲಿ ದರೋಡೆ ಮಾಡಿದೆ ಎಂದು ತಿಳಿಸಿದ್ದಾರೆ. ಈ ದರೋಡೆಯಲ್ಲಿ ಹಾರದಲ್ಲಿದ್ದ ಸುಮಾರು 3,000 ₹500 ನೋಟುಗಳನ್ನು ಕಳವು ಮಾಡಲಾಗಿದೆ. ಘಟನೆಯಲ್ಲಿ ಸಂತ್ರಸ್ತ ಷಾದ್ ಅವರಿಗೆ ತಲೆಗೆ ಗಾಯಗಳಾಗಿವೆ.

ಘಟನೆ ನಡೆದ ನಂತರ, ಇದರ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ರೀತಿಯ ಹಣದ ಪ್ರದರ್ಶನಗಳು ಅನಗತ್ಯ ಅಪಾಯಗಳನ್ನು ಆಹ್ವಾನಿಸುತ್ತವೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ವಾರ್ ಜಿಲ್ಲಾ ಪೊಲೀಸ್ ಉಪಾಧೀಕ್ಷಕ ಕೈಲಾಶ್ ಚೌಧರಿಪ್ರಕರಣ ದಾಖಲಿಸಿಕೊಂಡಿರುವುದನ್ನು ಖಚಿತಪಡಿಸಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read