ಹೊಳೆಯಲ್ಲಿ ಕಪ್ಪೆ ಚಿಪ್ಪು, ಮೀನು ಹಿಡಿಯಲು ಹೋಗಿದ್ದ ನಾಲ್ವರು ಸಾವು

ಉಡುಪಿ: ಹೊಳೆಯಲ್ಲಿ ಕಪ್ಪೆ ಚಿಪ್ಪು, ಮೀನು ಹಿಡಿಯಲು ಹೋಗಿದ್ದ ನಾಲ್ವರು ಮೃತಪಟ್ಟ ಘಟನೆ ಬ್ರಹ್ಮಾವರ ಸಮೇಪದ ಹೂಡೆಯ ಕಿಣಿಯಾರ ಕುದ್ರುವಿನಲ್ಲಿ ಭಾನುವಾರ ನಡೆದಿದೆ.

ಹೂಡೆಯ ಇಬಾಸ್, ಫೈಜಾನ್, ಶೃಂಗೇರಿಯ ಫರ್ಹಾನ್ ಮತ್ತು ಸುಫಾನ್ ಮೃತಪಟ್ಟವರು ಎಂದು ಹೇಳಲಾಗಿದೆ. ರಂಜಾನ್ ಅಂಗವಾಗಿ ಶೃಂಗೇರಿಯಿಂದ ಬ್ರಹ್ಮಾವರದ ಹೂಡೆಯಲ್ಲಿರುವ ಸಂಬಂಧಿಕರ ಮನೆಗೆ ಯುವಕರು ಬಂದಿದ್ದು, ಸ್ಥಳೀಯರೊಂದಿಗೆ ಕಪ್ಪೆಚಿಪ್ಪು ಸಂಗ್ರಹಿಸಲು ದೋಣಿಯಲ್ಲಿ ತೆರಳಿದ್ದರು.

7 ಜನ ಕಪ್ಪೆ ಚಿಪ್ಪು ತೆಗೆಯುವ ವೇಳೆ ಆಕಸ್ಮಿಕವಾಗಿ ಗುಂಡಿಗೆ ಇಳಿದಿದ್ದಾರೆ. ಆಳವಾದ ಗುಂಡಿಗೆ ಇಳಿದ ಮೂವರು ಈಜಿಕೊಂಡು ಪಾರಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಬ್ರಹ್ಮಾವರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read