BIG NEWS: ಅ. 22 ಜಾತಿ ಸಮೀಕ್ಷೆ ಬಗ್ಗೆ ಚರ್ಚೆಗೆ ವೀರಶೈವ ಲಿಂಗಾಯಿತ ಮುಖಂಡರ ಸಭೆ

ದಾವಣಗೆರೆ: ಜಾತಿ ಸಮೀಕ್ಷೆ ಕುರಿತಾಗಿ ಚರ್ಚೆ ನಡೆಸಲು ವೀರಶೈವ ಮಹಾಸಭಾ ಕರೆದಿರುವ ವೀರಶೈವ ಲಿಂಗಾಯಿತ ಮುಖಂಡರ ಸಭೆ ಅ. 22 ರಂದು ನಡೆಯಲಿದೆ ಎಂದು ಮಹಾಸಭಾಧ್ಯಕ್ಷ ಹಾಗೂ ಮಾಜಿ ಸಚಿವ ಡಾ. ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.

ಸರ್ಕಾರ ಜಾತಿ ಸಮೀಕ್ಷೆ ಬಿಡುಗಡೆ ವಿಚಾರವಾಗಿ ಸಂಪುಟ ಸಭೆಗೂ ಮುನ್ನವೇ ನಡೆಸುತ್ತಿರುವ ಮಹಾಸಭೆಯ ಸಭೆಯ ಕುರಿತಾಗಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಇದರಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷ ಎಂದೇನಿಲ್ಲ. ಇದು ಸಮಾಜದ ಪ್ರಶ್ನೆಯೇ ಹೊರತೂ ಪಕ್ಷದ್ದಲ್ಲ, ವೀರಶೈವ ಲಿಂಗಾಯಿತರೆಲ್ಲ ಒಂದಾಗಿ ಹೋಗುತ್ತೇವೆ ಎಂದು ತಿಳಿಸಿದ್ದಾರೆ.

ಸಚಿವ ಸಂಪುಟ ಸಭೆಗೆ ಮುನ್ನ ಅಕ್ಟೋಬರ್ 22 ರಂದು ಬೆಂಗಳೂರಿನಲ್ಲಿ ವೀರಶೈವ ಲಿಂಗಾಯತ ಮುಖಂಡರ ಸಭೆ ನಡೆಯಲಿದ್ದು, ಎಲ್ಲ ಮುಖಂಡರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read