ವಿಷದ ಬಾಟಲಿ ನುಂಗಿದ್ದ ನಾಗರಹಾವು ರಕ್ಷಣೆ

ಕಾರ್ಕಳ: ಕೋಳಿ ನುಂಗಲು ಹೋಗಿ ವಿಷದ ಬಾಟಲಿ ನುಂಗಿದ್ದ ನಾಗರಹಾವನ್ನು ರಕ್ಷಿಸಲಾಗಿದೆ. ಕಾರ್ಕಳ ತಾಲೂಕಿನ ನೀರೆ ಗ್ರಾಮದಲ್ಲಿ ಮಂಗಳವಾರ ರಾತ್ರಿ ಘಟನೆ ನಡೆದಿದೆ.

ಜಗದೀಶ್ ಎಂಬುವರ ಮನೆಯ ಆವರಣಕ್ಕೆ ಬಂದ ಹಾವು ಕೋಳಿಯೊಂದನ್ನು ಕಚ್ಚಿ ಸಾಯಿಸಿ ಅದನ್ನು ನುಂಗಲು ಯತ್ನಿಸಿದೆ. ಈ ವೇಳೆ ಕೋಳಿಯ ಪಕ್ಕದಲ್ಲಿ ಬಿದ್ದಿದ್ದ ವಿಷದ ಬಾಟಲಿ ಹಾವಿನ ಬಾಯಿಗೆ ಸಿಕ್ಕಿದ್ದು ಅದನ್ನೇ ನುಂಗಿದೆ.

ಉಡುಪಿಯ ಉರಗ ತಜ್ಞ ಗುರುರಾಜ್ ಸನಿಲ್ ಅವರಿಗೆ ಜಗದೀಶ್ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಗುರುರಾಜ್ ಹಾವು ಸೇರಿಕೊಂಡಿದ್ದ ಶೌಚಾಲಯದ ನೆಲ ಬಗೆದು ಹೊರ ತೆಗೆದಿದ್ದಾರೆ. ಹಾವಿನ ಹೊಟ್ಟೆ ಸೇರಿಕೊಂಡಿದ್ದ ವಿಷದ ಬಾಟಲಿಯನ್ನು ಅತಿ ಜಾಗರೂಕತೆಯಿಂದ ತಳ್ಳಿ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ನೀರೆ ಬೈಲೂರು ಸಮೀಪ ಕಾಡಿಗೆ ಹಾವನ್ನು ಬಿಡಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read