BIG NEWS: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಕೇಸ್; ಎನ್ ಐಎಯಿಂದ ಪ್ರಕರಣ ದಾಖಲು; ಎರಡು ದನಗಳಲ್ಲಿ ತನಿಖೆ ಆರಂಭ

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐಎ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣದ ಗಂಭೀರತೆ ಅರಿತು ಬಾಂಬ್ ಸ್ಫೋಟ ಕೇಸ್ ನ್ನು ಎನ್ ಐಎ ವರ್ಗಾಯಿಸಲಾಗಿದ್ದು, ಯುಎಪಿಎ ಅಡಿ ಹೆಚ್ ಎ ಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ನೆರಡು ದಿನಗಳಲ್ಲಿ ಎನ್ ಐ ಎ ಅಧಿಕಾರಿಗಳಿಂದ ತನಿಖೆ ನಡೆಯಲಿದೆ.

ಇನ್ನೊಂದೆಡೆ ಬಾಂಬ್ ಸ್ಫೋಟದ ಆರೋಪಿಯ ಕೆಲ ಕುರುಹುಗಳು ಪತ್ತೆಯಾಗಿದ್ದು, ಆತನಿಗಾಗಿ ಶೋಧಕಾರ್ಯ ಮುಂದುವರೆದಿದೆ. ಆರೋಪಿ ಪತ್ತೆಯಾಗದಿದ್ದಲ್ಲಿ ಪೊಲೀಸರು ಶೀಘ್ರದಲ್ಲೇ ರೇಖಾಚಿತ್ರ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇನ್ನು ರಾಮೇಶ್ವರಂ ಕೆಫೆಯಿಂದ 1 ಕಿ.ಮೀ ದೂರದಲ್ಲಿರುವ ಸಿಸಿಟಿವಿಯಲ್ಲಿ ಶಂಕಿತ ಓಡಾಟ ಸೆರೆಯಾಗಿದೆ. ಬಾಂಬ್ ಇಡಲು ಯಾವ ಮಾರ್ಗದಲ್ಲಿ ಬಂದಿದ್ದನೋ ಅದೇ ಮಾರ್ಗದಲ್ಲಿ ಆತ ವಾಪಾಸ್ ಆಗಿಲ್ಲ. ಬೇರೆ ಯಾವ ಮಾರ್ಗದ ಮೂಲಕ ತೆರಳಿದ್ದಾನೇ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read