SHOCKING: ಶ್ವಾಸಕೋಶಕ್ಕೆ ಚುಚ್ಚಿದ ಪಕ್ಕೆಲುಬು, 34 ಕಡೆ ಗಾಯ: ಬೆಚ್ಚಿ ಬೀಳಿಸುವಂತಿದೆ ರೇಣುಕಾಸ್ವಾಮಿ ಭೀಭತ್ಸ ಹತ್ಯೆಯ ಪೋಸ್ಟ್ ಮಾರ್ಟಂ ವರದಿ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ನಟ ದರ್ಶನ್ ಗ್ಯಾಂಗ್ ಭೀಭತ್ಸವಾಗಿ ಹತ್ಯೆ ಮಾಡಿರುವುದು ಪೋಸ್ಟ್ ಮಾರ್ಟಂ ವರದಿಯಲ್ಲಿ ಬಯಲಾಗಿದೆ.

ರೇಣುಕಾ ಸ್ವಾಮಿ ಪೋಸ್ಟ್ ಮಾರ್ಟಂ ವರದಿ ಬಹಿರಂಗವಾಗಿದ್ದು, ರೇಣುಕಾ ಸ್ವಾಮಿಯ ದೇಹದ ಮೇಲೆ 34 ಕಡೆ ಗಾಯಗಳಾಗಿವೆ. ರೇಣುಕಾ ಸ್ವಾಮಿ ಎದೆಗೆ ಕಾಲಿನಿಂದ ಒದ್ದಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಪಕ್ಕೆಲುಬು ಕಟ್ ಆಗಿ ಶ್ವಾಸಕೋಶಕ್ಕೆ ಚುಚ್ಚಿಕೊಂಡಿದೆ. ಆರೋಪಿಗಳ ಹೊಡೆತಕ್ಕೆ ದೇಹದ ಹಲವು ಕಡೆ ರಕ್ತ ಹೆಪ್ಪುಗಟ್ಟಿದೆ. ಜೊತೆಗೆ ಕರೆಂಟ್ ಶಾಕ್ ನೀಡಿರುವುದು ಸಹ ಬಹಿರಂಗವಾಗಿದೆ.

ಚಿತ್ರ ಹಿಂಸೆ ನೀಡಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಲಾಗಿದೆ. ದೊಣ್ಣೆ ಸೇರಿ ವಿವಿಧ ವಸ್ತುಗಳಿಂದ ಹಲ್ಲೆ ಮಾಡಿದ್ದು, ಎತ್ತಿ ಎಸೆಯಲಾಗಿದೆ. ಪಕ್ಕೆಲೆಬು ಮೂಳೆ ಮುರಿದು ಶ್ವಾಸಕೋಶಕ್ಕೆ ಚುಚ್ಚಿಕೊಂಡಿದೆ. ದೇಹದ 34 ಕಡೆದ ಗಾಯಗಳಾಗಿವೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read