ಪಂಚ ರತ್ನಾನೋ ಪಂಚೆ ರತ್ನಾನೋ, ಅದೇನು ಕೊಡ್ತಾರೋ ಗೊತ್ತಿಲ್ಲ: ಡಿ.ಕೆ. ಸುರೇಶ್ ಲೇವಡಿ

ರಾಮನಗರ: ಮಾಜಿ ಸಿಎಂ ಹೆಚ್‍.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ‘ಪಂಚರತ್ನ ಯಾತ್ರೆ’ ಕೈಗೊಂಡಿರುವ ಬಗ್ಗೆ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಲೇವಡಿ ಮಾಡಿದ್ದಾರೆ.

ರಾಮನಗರ ಜಿಲ್ಲೆ, ಮಾಗಡಿ ತಾಲೂಕಿನ ಕುದೂರಿನಲ್ಲಿ ಮಾತನಾಡಿದ ಅವರು, ಅಧಿಕಾರದಲ್ಲಿದ್ದಾಗ ಬಡವರು, ಕಾರ್ಯಕರ್ತರ ಬಗ್ಗೆ ಚಿಂತನೆ ಮಾಡದವರು ಈಗ ಪಂಚರತ್ನ ಯೋಜನೆ ಕೊಡುತ್ತೇವೆ ಎಂದು ಹೊರಟಿದ್ದಾರೆ. ಪಂಚ ರತ್ನಾನೋ ಪಂಚೆ ರತ್ನಾನೋ, ಅದೇನ್ ಕೊಡ್ತಾರೋ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಕೈಗೊಂಡಿರುವ ಪಂಚರತ್ನ ರಥಯಾತ್ರೆ ಬಗ್ಗೆ ಲೇವಡಿ ಮಾಡಿದ್ದಾರೆ

ಕುಮಾರಸ್ವಾಮಿ ಬಗ್ಗೆ ಮಾಗಡಿ ಬಾಲಕೃಷ್ಣ ಅವರಿಗೆ ಗೊತ್ತಿದೆ. ಯಾರ್ಯಾರಿಗೆ ಏನೇನು ಕೊಡಿಸಿದ್ದಾರೆ? ಪಂಚ ರತ್ನವನ್ನು ಎಲ್ಲೆಲ್ಲಿ ಇಟ್ಟಿದ್ದಾರೆ ಎಂದು ಬಾಲಕೃಷ್ಣ ಅವರಿಗೆ ಚೆನ್ನಾಗಿ ಗೊತ್ತಿದೆ. ಕುಮಾರಸ್ವಾಮಿಗೆ ಗೊತ್ತಿರೋದು ಎರಡೇ ರತ್ನವಂತೆ, ಉಳಿದ ರತ್ನಗಳ ಬಗ್ಗೆ ಗೊತ್ತಿಲ್ಲವಂತೆ ಎಂದು ವ್ಯಂಗ್ಯವಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read