ಗುಜರಾತ್ : ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ ಮರುದಿನ ಅಂದರೆ ಇಂದು ಗುಜರಾತ್ ಭುಜ್ ವಾಯುಪಡೆ ನಿಲ್ದಾಣಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಿದ್ದು, ಯೋಧರೊಂದಿಗೆ ಸಂವಹನ ನಡೆಸಿದರು. ಆಪರೇಷನ್ ಸಿಂಧೂರ್ ಯಶಸ್ವಿಯಾದ ಬೆನ್ನಲ್ಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತೆ ಇಂದು ಯೋಧರನ್ನು ಭೇಟಿಯಾದರು. ಭಾರತೀಯ ಸಶಸ್ತ್ರ ಪಡೆಗಳ ಯೋಧರು ‘ಭಾರತ್ ಮಾತಾ ಕಿ ಜೈ’ ಘೋಷಣೆಗಳನ್ನು ಕೂಗಿದರು.
ಆಪರೇಷನ್ ಸಿಂಧೂರ್ ಅಡಿಯಲ್ಲಿ, ಭಾರತೀಯ ಸಶಸ್ತ್ರ ಪಡೆಗಳು ಶತ್ರು (ಪಾಕಿಸ್ತಾನ) ಮೇಲೆ ಪ್ರಾಬಲ್ಯ ಸಾಧಿಸಿದ್ದಲ್ಲದೆ, ಅವರನ್ನು ನಾಶಮಾಡುವಲ್ಲಿಯೂ ಯಶಸ್ವಿಯಾದವು ಎಂದು ಹೇಳಿದರು. ಪಾಕಿಸ್ತಾನದಲ್ಲಿ ಪೋಷಿಸಲಾಗುತ್ತಿರುವ ಭಯೋತ್ಪಾದನೆಯನ್ನು ಹತ್ತಿಕ್ಕಲು ಭಾರತೀಯ ವಾಯುಪಡೆಗೆ (ಐಎಎಫ್) ಕೇವಲ 23 ನಿಮಿಷಗಳು ಸಾಕು ಎಂದು ಅವರು ಹೇಳಿದರು. ಆಪರೇಷನ್ ಸಿಂಧೂರ್ ಜಸ್ಟ್ ಟ್ರೇಲರ್ ಅಷ್ಟೇ, ಪಿಕ್ಚರ್ ಅಭಿ ಬಾಕಿ ಹೈ ಎಂದು ರಾಜನಾಥ್ ಸಿಂಗ್ ಗುಡುಗಿದ್ದಾರೆ.
ಜನರು ಉಪಾಹಾರ ಸೇವಿಸಲು ತೆಗೆದುಕೊಳ್ಳುವ ಸಮಯವನ್ನು ನೀವು ಶತ್ರುಗಳನ್ನು ಎದುರಿಸಲು ಬಳಸಿದ್ದೀರಿ ಎಂದು ನಾನು ಹೇಳುವುದು ತಪ್ಪಲ್ಲ. ಶತ್ರುಗಳ ಭೂಮಿಗೆ ಹೋಗಿ ನೀವು ಕ್ಷಿಪಣಿಗಳನ್ನು ಬೀಳಿಸಿದ್ದೀರಿ. ಆಪರೇಷನ್ ಸಿಂಧೂರ್ ಸಮಯದಲ್ಲಿ ನೀವು ಏನೇ ಮಾಡಿದರೂ ಅದು ಎಲ್ಲಾ ಭಾರತೀಯರನ್ನು ಹೆಮ್ಮೆಪಡುವಂತೆ ಮಾಡಿದೆ. ಪಾಕಿಸ್ತಾನದಲ್ಲಿ ಪೋಷಿಸಲಾಗುತ್ತಿರುವ ಭಯೋತ್ಪಾದನೆಯನ್ನು ಹತ್ತಿಕ್ಕಲು ಭಾರತೀಯ ವಾಯುಪಡೆಗೆ ಕೇವಲ 23 ನಿಮಿಷಗಳು ಸಾಕು,” ಎಂದು ಅವರು ಹೇಳಿದರು.
ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ ಎಂದು ಪ್ರತಿಪಾದಿಸಿದ ರಕ್ಷಣಾ ಸಚಿವರು, ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದರು. “ಇದು ಕೇವಲ ಟ್ರೇಲರ್, ಚಿತ್ರ ಅಭಿ ಬಾಕಿ ಹೈ… ಸರಿಯಾದ ಸಮಯ ಬಂದಾಗ, ನಾವು ಪೂರ್ಣ ಚಿತ್ರವನ್ನು ಜಗತ್ತಿಗೆ ತೋರಿಸುತ್ತೇವೆ. ನಾವು ಪಾಕಿಸ್ತಾನವನ್ನು ಪರೀಕ್ಷಣದಲ್ಲಿ ಇರಿಸಿದ್ದೇವೆ. ಅದರ ನಡವಳಿಕೆ ಸುಧಾರಿಸಿದರೆ, ಸರಿ, ಇಲ್ಲದಿದ್ದರೆ, ಅದಕ್ಕೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ” ಎಂದು ರಾಜನಾಥ್ ಹೇಳಿದರು.
965 ರಲ್ಲಿ ಪಾಕಿಸ್ತಾನದ ವಿರುದ್ಧ ನಮ್ಮ ಗೆಲುವಿಗೆ ಭುಜ್ ಸಾಕ್ಷಿಯಾಗಿತ್ತು, ಮತ್ತು ಇಂದು ಮತ್ತೆ ಪಾಕಿಸ್ತಾನದ ವಿರುದ್ಧ ಭಾರತದ ಗೆಲುವಿಗೆ ಸಾಕ್ಷಿಯಾಗಿದೆ … ಇಲ್ಲಿ ಹಾಜರಿರುವುದಕ್ಕೆ ನನಗೆ ಹೆಮ್ಮೆ ಅನಿಸುತ್ತಿದೆ” ಎಂದು ಅವರು ಭುಜ್ನ ವಾಯುಪಡೆಯ ನಿಲ್ದಾಣದಲ್ಲಿ ಐಎಎಫ್ ಸಿಬ್ಬಂದಿಯೊಂದಿಗೆ ಸಂವಾದ ನಡೆಸುತ್ತಾ ಹೇಳಿದರು. ಗುಜರಾತ್ ಮೂಲದ ವಾಯುಪಡೆಯ ನಿಲ್ದಾಣವು ಕಳೆದ ವಾರ ಪಾಕಿಸ್ತಾನ ಸೇನೆ ಗುರಿಯಾಗಿಸಿಕೊಂಡ ನೆಲೆಗಳಲ್ಲಿ ಒಂದಾಗಿದೆ.
#WATCH | Defence Minister Rajnath Singh with air warriors at Gujarat's Bhuj Air Base; Indian Air Force chief Air Chief Marshal Amar Preet Singh also present pic.twitter.com/J7lLhv85JI
— ANI (@ANI) May 16, 2025
#WATCH | Gujarat: At Bhuj Air Force Station, Defence Minister Rajnath Singh says, "You have made the entire nation believe that 'Naya Bharat ab sahan nahi karta, balki wah palat kar jawab deta hai'. I can say all I want but my words would fail to assess your actions. On behalf of… pic.twitter.com/uT1dsCvBCf
— ANI (@ANI) May 16, 2025
#WATCH | Gujarat: At Bhuj Air Force Station, Defence Minister Rajnath Singh says, "Now, the fight against terrorism is not just a matter of security, but it is now also a part of the National Defence Doctrine. Together will uproot this proxy and hybrid warfare, as the Defence… pic.twitter.com/VnkhYBMs61
— ANI (@ANI) May 16, 2025
#WATCH | Gujarat: As Defence Minister Rajnath Singh interacts with them at Bhuj Air Force Station, Indian armed forces jawans raise slogans of 'Bharat Mata ki jai'. pic.twitter.com/Kj0OMYLa4s
— ANI (@ANI) May 16, 2025