‘ನೆಕ್ಸ್ಟ್ ಟಾರ್ಗೆಟ್ ಈಸ್ ಮುಖೇಶ್ ಅಂಬಾನಿ’…! ಕಾಣಿಕೆ ಡಬ್ಬದಲ್ಲಿತ್ತು ಬೆದರಿಕೆ ಪತ್ರ

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಚಲೇಶ್ವರ ಮಹಾದೇವ ದೇವಸ್ಥಾನದ ಕಾಣಿಕೆ ಡಬ್ಬವನ್ನು ಅರ್ಚಕರು ತೆರೆದಾಗ ಅದರಲ್ಲಿ ಸ್ಟಾಂಪ್ ಪೇಪರ್ ಪತ್ತೆಯಾಗಿದೆ. ಅದರಲ್ಲಿ ಬರೆದಿರುವುದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಸ್ಟಾಂಪ್ ಪೇಪರ್ ಮೇಲೆ, ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿಗೆ ಬೆದರಿಕೆ ಹಾಕಿರುವುದು ಕಂಡು ಬಂದಿದೆ.

ಅಚಲೇಶ್ವರ ಮಹಾದೇವನ ದೇವಾಲಯದಲ್ಲಿ ಸೋಮವಾರ ಶ್ರಾವಣ ಮಾಸದ ನಿಮಿತ್ತ ಭಕ್ತರು ಪೂಜೆ ಸಲ್ಲಿಸಿದ್ದರು. ಸಂಜೆ ಅರ್ಚಕರು ದೇವಸ್ಥಾನದ ಕಾಣಿಕೆ ಡಬ್ಬ ತೆಗೆದಾಗ, ಅದರಲ್ಲಿ ಸ್ಟಾಂಪ್ ಪೇಪರ್ ಪತ್ತೆಯಾಗಿದೆ. ಸ್ಟಾಂಪ್ ಪೇಪರ್ ಮೇಲೆ ಬರೆದಿದ್ದನ್ನು ಓದಿದ ಪುರೋಹಿತರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಲ್ಲಿ ಮುಖೇಶ್‌ ಅಂಬಾನಿಗೆ ಬೆದರಿಕೆ ಹಾಕಲಾಗಿದೆ.

ಇದರಲ್ಲಿ, ನನ್ನ ಮುಂದಿನ ಗುರಿ ಮುಕೇಶ್ ಧೀರೂಭಾಯಿ ಅಂಬಾನಿ ಮುಂಬೈ ಎಂದು ಬರೆಯಲಾಗಿದೆ. ಅಲ್ಲದೆ ಕಂಪೂ ಗ್ವಾಲಿಯರ್‌ನ ಬಾಲಾಜಿ ವಿಹಾರ್ ನಾಕಾ ನಿವಾಸಿ ರಾಮೇಶ್ವರ ದಯಾಳ್ ಶರ್ಮಾ ಅವರ ಪುತ್ರ ಮನೋಜ್ ಶರ್ಮಾ ಎಂಬ ವಿಳಾಸವಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read