ಬೆಂಗಳೂರು : ಕರ್ನಾಟಕದಲ್ಲಿ ‘ಅಹಿತಕರ ಘಟನೆ’ ತಡೆಗೆ ಶೀಘ್ರವೇ ಹೊಸ ಕಾಯಿದೆ ಜಾರಿಗೊಳಿಸಲಾಗುತ್ತದೆ ಎಂದು ರಾಹುಲ್ ಗಾಂಧಿ ಸಿಎಂ ಸಿದ್ದರಾಮಯ್ಯ ಅವರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಇಂದು ದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ರಾಹುಲ್ ಗಾಂಧಿ ರಾಜ್ಯದ ಕಾಂಗ್ರೆಸ್ ನಾಯಕರುಗಳ ಜೊತೆ ಚರ್ಚೆ ನಡೆಸಿದರು. ಈ ವೇಳೆ ಅಹಿತಕರ ಘಟನೆ ತಡೆಗೆ ಶೀಘ್ರವೇ ಹೊಸ ಕಾಯಿದೆ ಜಾರಿಗೆ ತರಲಾಗುವುದು ಎಂದು ರಾಗಾ ಸಿಎಂ ಸಿದ್ದರಾಮಯ್ಯಗೆ ಭರವಸೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಘಟನೆ ಕುರಿತು ಪ್ರತ್ಯೇಕ ವರದಿ ಮಂಡಿಸಿದ್ದು, ಮುಂಜಾಗೃತಾ ಕ್ರಮ ವಹಿಸುವಂತೆ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ. ಬೆಂಗಳೂರಿನ ನಡೆದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು.
#WATCH | Delhi | Karnataka CM Siddaramaiah and Deputy CM DK Shivakumar leave from Indira Bhawan, the new headquarters of the Congress party
— ANI (@ANI) June 10, 2025
Deputy CM DK Shivakumar says, "The general secretary has spoken – 'it is one voice, one party' ."
According to sources, Karnataka CM… pic.twitter.com/KaqQrk1oO2