ದೇವಸ್ಥಾನದ ಬಳಿ ಕಾರು ನಿಲ್ಲಿಸಬೇಡ ಅಂದಿದ್ದಕ್ಕೆ ಕಾನ್ಸ್ ಟೇಬಲ್ ಮೇಲೆ ಯುವಕನಿಂದ ಹಲ್ಲೆ

ಮೈಸೂರು: ದೇವಸ್ಥಾನದ ಬಳಿ ಕಾರು ನಿಲ್ಲಿಸಬೇಡ ಎಂದಿದ್ದಕ್ಕೆ ಕಾನ್ಸ್ ಟೇಬಲ್ ಮೇಲೆ ಯುವಕನೊಬ್ಬ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ. ಕಾನ್ಸ್ ಟೇಬಲ್ ಪುಟ್ಟರಾಜು ಎಂಬುವವರ ಮೇಲೆ ಪ್ರೀತಂ ಎಂಬಾತ ಹಲ್ಲೆ ನಡೆಸಿದ್ದಾನೆ. ಈ ಬಗ್ಗೆ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿನ್ನೆ ರಾತ್ರಿ ದೇವಸ್ಥಾನದ ಬಳಿ ಯುವಕ ಪ್ರೀತಂ ಕಾರು ನಿಲ್ಲಿಸಿದ್ದ. ತಡರಾತ್ರಿಯಾದರೂ ಕಾರು ತೆಗೆದಿರಲಿಲ್ಲ. ತಕ್ಷಣ ಕಾರು ತೆಗೆಯುವಂತೆ ಪಿಸಿ ಪುಟ್ಟರಾಜು ಪ್ರೀತಂ ಗೆ ಹೇಳಿದ್ದರು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದು ಪ್ರೀತಂ ಪಿಸಿ ಪುಟ್ಟರಾಜು ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವಕ ಪ್ರೀತಂ ಹಾಗೂ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read