ಸೂರತ್ನ ಸರ್ದಾರ್ ಮಾರುಕಟ್ಟೆಯಲ್ಲಿ ತರಕಾರಿ ಕದ್ದರೆಂಬ ಕ್ಷುಲ್ಲಕ ಕಾರಣಕ್ಕೆ ಭದ್ರತಾ ಸಿಬ್ಬಂದಿಯಿಬ್ಬರು ತಾಯಿ ಮತ್ತು ಮಗಳ ಮೇಲೆ ನಡೆಸಿದ ಹೇಯ ಕೃತ್ಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಾನವೀಯತೆಯನ್ನೇ ನಾಚಿಸುವಂತಿದೆ.
ವರದಿಗಳ ಪ್ರಕಾರ, ಮಹಿಳೆ ತನ್ನ ಪತಿ ಮತ್ತು ಮಗಳೊಂದಿಗೆ ವಿಲೇವಾರಿ ಮಾಡಬೇಕಿದ್ದ ತರಕಾರಿಗಳನ್ನು ತೆಗೆದುಕೊಳ್ಳಲು ಮಾರುಕಟ್ಟೆಗೆ ತೆರಳಿದ್ದರು. ಈ ವೇಳೆ ಅಲ್ಲಿನ ಭದ್ರತಾ ಸಿಬ್ಬಂದಿ ಅವರನ್ನು ತಡೆದು ಕಳ್ಳತನದ ಆರೋಪ ಹೊರಿಸಿ ಹಲ್ಲೆ ನಡೆಸಿದ್ದಾರೆ. ವಿಡಿಯೋದಲ್ಲಿ ಒಬ್ಬ ಭದ್ರತಾ ಸಿಬ್ಬಂದಿ ಬಾಲಕಿಯನ್ನು ಕೂದಲು ಹಿಡಿದು ಎಳೆಯುತ್ತಿರುವುದು ಮತ್ತು ಆಕೆ ಸಹಾಯಕ್ಕಾಗಿ ಕೂಗುತ್ತಿದ್ದರೂ ಆಕೆಯ ಹೊಟ್ಟೆಗೆ ಒದೆಯುತ್ತಿರುವುದು ಕಾಣಿಸುತ್ತದೆ. ಮತ್ತೊಬ್ಬ ಸಿಬ್ಬಂದಿ ಮಹಿಳೆಯನ್ನು ಕೂದಲು ಹಿಡಿದು ಎಳೆದು ದಪ್ಪ ಕೋಲಿನಿಂದ ಥಳಿಸುತ್ತಿದ್ದಾನೆ. ಈ ದೃಶ್ಯಗಳನ್ನು ನೋಡಿದ ಜನರು ಮೌನವಾಗಿರುವುದು ಆಘಾತಕಾರಿ.
ಸ್ಥಳೀಯ ವ್ಯಾಪಾರಿಗಳು ತಾವು ಬಿಸಾಡಿದ ತರಕಾರಿಗಳನ್ನು ಸಣ್ಣ ಅಂಗಡಿಗಳಿಗೆ ಮಾರಾಟ ಮಾಡುವುದರಿಂದ, ಬೇರೆಯವರು ಅವುಗಳನ್ನು ಉಚಿತವಾಗಿ ಕೊಂಡೊಯ್ಯುವುದನ್ನು ತಡೆಯಲು ಭದ್ರತಾ ಸಿಬ್ಬಂದಿಗೆ ಸೂಚನೆ ನೀಡಿದ್ದರು ಎನ್ನಲಾಗಿದೆ. ಸಾರ್ವಜನಿಕರ ತೀವ್ರ ವಿರೋಧದ ನಂತರ ಅನಿಲ್ ತಿವಾರಿ ಮತ್ತು ಆದಿತ್ಯಸಿಂಗ್ ರಾಜೇಶ್ಸಿಂಗ್ ಎಂಬ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಅಲ್ಲದೆ, ಗಲಾಟೆಯಲ್ಲಿ ಭಾಗಿಯಾಗಿದ್ದ ಮಹಿಳೆಯ ಪತಿಯನ್ನೂ ಸಹ ಪ್ರಕರಣದಲ್ಲಿ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಅಮಾನವೀಯ ಕೃತ್ಯಕ್ಕೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
— बेसिक शिक्षा सूचना केंद्र (@Info_4Education) April 10, 2025
सूरत के एपीएमसी मार्केट में सुरक्षा रक्षक द्वारा मासूम बच्ची और उसकी मां पर इस बर्बरता ने हमारे समाज की नैतिकता को चौंका दिया है। ये सिर्फ हमला नहीं, हमारे समाज की जड़ों में छिपे असंवेदनशीलता का परिचायक है!
अगर वे जो हमारी सुरक्षा का दायित्व निभाते हैं, हम पर हाथ उठा लें, तो… pic.twitter.com/WOKz9m5kQR