ಮಂತ್ರಾಲಯ ಗುರು ರಾಯರ ಮಠಕ್ಕೆ ಹರಿದು ಬಂತು 3.39 ಕೋಟಿಗೂ ಅಧಿಕ ಕಾಣಿಕೆ!

ರಾಯಚೂರು: ಕಲಿಯುಗದ ಕಾಮಧೇನು,ಕಲ್ಪವೃಕ್ಷ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು ಈ ಬಾರಿ ಬರೋಬ್ಬರಿ 3.39 ಕೋಟಿಗೂ ಅಧಿಕ ಕಾಣಿಕೆ ಸಂಗ್ರಹವಾಗಿದೆ.

ಈ ತಿಂಗಳು ಗುರುವೈಭವೋತ್ಸವ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಮಂತ್ರಾಲಯ ರಾಯರ ಮಠಕ್ಕೆ ರಾಜ್ಯ-ಹೊರರಾಜ್ಯ, ದೇಶ-ವಿದೇಶಗಳಿಂದ ಭಕ್ತಸಾಗರವೇ ಹರಿದುಬಂದಿದ್ದು, ರಾಯರ ಮಠಕ್ಕೆ ಕೋಟ್ಯಂತರ ರೂಪಾಯಿ ಕಾಣಿಕೆ ಹಾಗೂ ಚಿನ್ನಾಭರಣ ಸಮರ್ಪಿಸಿದ್ದಾರೆ.

ಕಳೆದ ಒಂದು ತಿಂಗಳಲ್ಲಿ 3 ಕೋಟಿ 39 ಲಕ್ಷ 35 ಸಾವಿರದ 121 ರೂಪಾಯಿ ಹಣ ಸಂಗ್ರಹವಾಗಿದೆ. ಇದರಲ್ಲಿ 9 ಲಕ್ಷ 34 ಸಾವಿರದ 500 ರೂಪಾಯಿ ನಾಣ್ಯಗಳು, 3 ಕೋಟಿ 48 ಲಕ್ಷದ 69 ಸಾವಿರದ 621 ರೂಪಾಯಿ ನೋಟುಗಳು ಇವೆ. 37.200 ಗ್ರಾಂ ಚಿನ್ನ, 1280 ಕೆಜಿ ಬೆಳ್ಳಿ ಕಾಣಿಕೆಯನ್ನು ಭಕ್ತರು ಸಮರ್ಪಿಸಿದ್ದಾರೆ ಎಂದು ಶ್ರೀಮಠ ಪ್ರಕಟಣೆಯಲ್ಲಿ ತಿಳಿಸಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read