ಉದಯಪುರ: ರಾಜಸ್ಥಾನದ ಉದಯಪುರದ ಖಾಂಜಿಪುರ್ ಪ್ರದೇಶದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಹಾವಿನ ಕಡಿತಕ್ಕೆ ಒಳಗಾದ ವ್ಯಕ್ತಿಯೊಬ್ಬರು ತಮಗೆ ಕಚ್ಚಿದ ಹಾವನ್ನೇ ಹಿಡಿದುಕೊಂಡು ಆಸ್ಪತ್ರೆಗೆ ಬಂದಿದ್ದು, ವೈದ್ಯರು ಮತ್ತು ನೆರೆದಿದ್ದವರನ್ನು ದಿಗ್ಭ್ರಮೆಗೊಳಿಸಿದ್ದಾರೆ.
ಆತಂಕಗೊಳ್ಳುವ ಬದಲು, ಆ ವ್ಯಕ್ತಿ ತಾಳ್ಮೆಯಿಂದ ಹಾವನ್ನು ಚೀಲವೊಂದರಲ್ಲಿ ಇಟ್ಟುಕೊಂಡು ಆಸ್ಪತ್ರೆಗೆ ಬಂದಿದ್ದಾರೆ. ವೈದ್ಯರನ್ನು ಕಂಡ ತಕ್ಷಣ, “ಇದೇ ನನಗೆ ಕಚ್ಚಿದ ಹಾವು, ದಯವಿಟ್ಟು ಬೇಗ ಚಿಕಿತ್ಸೆ ನೀಡಿ” ಎಂದು ಹೇಳಿದ್ದಾರೆ. ಈ ಅಸಾಮಾನ್ಯ ದೃಶ್ಯಾವಳಿ ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈದ್ಯರು ತಕ್ಷಣವೇ ವ್ಯಕ್ತಿಗೆ ವಿಷ ನಿರೋಧಕ (ಆಂಟಿ-ವೆನಮ್) ಚುಚ್ಚುಮದ್ದನ್ನು ನೀಡಿ ಚಿಕಿತ್ಸೆ ಪ್ರಾರಂಭಿಸಿದರು. ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಬಂದಿದ್ದರಿಂದಲೇ ಅವರ ಪ್ರಾಣ ಉಳಿದಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಿರ್ಣಾಯಕ ಪರಿಸ್ಥಿತಿಯಲ್ಲಿಯೂ ಆ ವ್ಯಕ್ತಿ ತೋರಿದ ಧೈರ್ಯ ಮತ್ತು ಸಂಯಮ ಆನ್ಲೈನ್ನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
"इसी ने मुझे काटा है, जल्दी इलाज कीजिए…
— Prabhakar Kumar (@prabhakarjourno) July 15, 2025
"उदयपुर के खांजीपीर इलाके में एक शख्स को सांप ने काट लिया। लेकिन डरने की बजाय वो बहादुरी दिखाते हुए सांप को थैली में डालकर सीधे अस्पताल पहुंचा और डॉक्टरों से बोला — "इसी ने काटा है, जल्दी इलाज कीजिए।
"डॉक्टरों ने फौरन एंटी वेनम देकर… pic.twitter.com/XrQXNsxGUA