BIG NEWS: ಸಂವಾದದ ವೇಳೆ ನಗೆಪಾಟಲಿಗೀಡಾದ ಸಚಿವ ಮಧು ಬಂಗಾರಪ್ಪ: ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ: ಗರಂ ಆದ ಸಚಿವರು

ಬೆಂಗಳೂರು: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಕನ್ನಡ ಭಾಷೆ, ಅವರ ಮಾತುಗಳು ಆಗಾಗ ಚರ್ಚೆಯಾಗುತ್ತಲೇ ಇರುತ್ತವೆ. ಇದೀಗ ಶಿಕ್ಷಣ ಸಚಿವ ಕನ್ನಡದ ಬಗ್ಗೆ ವಿದ್ಯಾರ್ಥಿಗಳೇ ಕಾಲೆಳೆದಿರುವ ಘಟನೆ ನಡೆದಿದೆ.

ವಿದ್ಯಾರ್ಥಿಗಳೊಂದಿಗಿನ ಆನ್ ಲೈನ್ ಸಂವಾದ ಕಾರ್ಯಕ್ರಮದ ವೇಳೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ನಗೆಪಾಟಲಿಗೀದಾಗಿದ್ದಾರೆ. ವಿದ್ಯಾರ್ಥಿಯೋರ್ವ ‘ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ’ ಎಂದಿದ್ದಾನೆ. ವಿದ್ಯಾರ್ಥಿ ಹೇಳಿಕೆಗೆ ಸಭೆಯಲ್ಲಿ ಎಲ್ಲರೂ ನಕ್ಕಿದ್ದಾರೆ. ಇದರಿಂದ ಶಿಕ್ಷಣ ಸಚಿವ ಮಧುಬಂಗಾರಪ್ಪ ಮುಜುಗರಕ್ಕೀದಾಗಿದ್ದಾರೆ. ವಿದ್ಯಾರ್ಥಿ ಹೇಳಿಕೆಗೆ ಗರಂ ಆದ ಸಚಿವ ಮಧು ಬಂಗಾರಪ್ಪ, ಯಾರೋ ಅದು ಹಾಗೇ ಹೇಳಿದ್ದು? ಎಂದು ಗದರಿದ್ದಾರೆ.

ನಾನು ಕನ್ನಡ ಅಥವಾ ಉರ್ದು ಮಾತನಾಡುತ್ತೇನೆ. ವಿದ್ಯಾರ್ಥಿಗೆ ಹೀಗೆ ಹೇಳು ಎಂದು ಹೇಳಿಕೊಟ್ಟವರು ಯಾರು? ಆತನನ್ನು ಸುಮ್ಮನೆ ಬಿಡಬೇಡಿ. ಏನು ಅಂತಾ ಕೇಳಿ ಎಂದು ಸಚಿವರು ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಅವರಿಗೆ ಸೂಚಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read