alex Certify ʼತೂಕʼ ಇಳಿಸಿಕೊಳ್ಳುವ ಭರದಲ್ಲಿ ಮಾಡಬೇಡಿ ಈ ತಪ್ಪು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼತೂಕʼ ಇಳಿಸಿಕೊಳ್ಳುವ ಭರದಲ್ಲಿ ಮಾಡಬೇಡಿ ಈ ತಪ್ಪು…..!

ನಿಂಬೆಹಣ್ಣಿನಲ್ಲಿರುವ ಆರೋಗ್ಯಕಾರಿ ಗುಣಗಳು ನಮಗೆಲ್ಲಾ ತಿಳಿದಿದೆ. ನಿಂಬೆಯಲ್ಲಿ ಸಾಕಷ್ಟು ವಿಟಮಿನ್ ಸಿ ಇದೆ. ಅನೇಕರು ಪ್ರತಿದಿನ ಬೆಳಗ್ಗೆ ಬಿಸಿನೀರಿಗೆ ನಿಂಬೆ ರಸ ಬೆರೆಸಿ ಕುಡಿಯುವ ಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ ನಿಂಬೆ ನೀರಿನ ಅತಿಯಾದ ಸೇವನೆ ಕೂಡ ಅಪಾಯಕಾರಿ. ಇದರಿಂದ ಎದೆಯುರಿ ಬರಬಹುದು. ಏಕೆಂದರೆ ನಿಂಬೆಹಣ್ಣು ಪೆಪ್ಸಿನ್ ಎಂಬ ಕಿಣ್ವವನ್ನು ಹೊಂದಿರುತ್ತದೆ, ಅದು ಪ್ರೋಟೀನ್‌ಗಳನ್ನು ಒಡೆಯಲು ಕೆಲಸ ಮಾಡುತ್ತದೆ. ಈ ಪೆಪ್ಸಿನ್ ಕಿಣ್ವವು ಹುಣ್ಣುಗಳಿಗೆ ಒಳ್ಳೆಯದಲ್ಲ.

ನಿಂಬೆರಸ ಬೆರೆಸಿದ ನೀರನ್ನು ಬೇಸಿಗೆಯಲ್ಲಿ ಶಾಖದಿಂದ ಉಪಶಮನವನ್ನು ಪಡೆಯಲು ಕುಡಿಯುತ್ತಾರೆ. ಇದು ದೇಹವನ್ನು ತೇವಾಂಶದಿಂದಿಡುತ್ತದೆ. ತೂಕವನ್ನು ನಿಯಂತ್ರಿಸುತ್ತದೆ. ಜೀರ್ಣಕಾರಿ ಸಮಸ್ಯೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಆದರೆ ತೂಕ ಇಳಿಸಿಕೊಳ್ಳಲು ನಿಂಬೆ ನೀರನ್ನು ಅನಿಯಂತ್ರಿತವಾಗಿ ಕುಡಿಯುತ್ತಿದ್ದರೆ, ಅದರ ಅಡ್ಡಪರಿಣಾಮಗಳನ್ನು ಸಹ ತಿಳಿದುಕೊಳ್ಳಬೇಕು.

ನಿಂಬೆ ನೀರನ್ನು ಜಾಸ್ತಿ ಕುಡಿಯುವುದರಿಂದ ಎದೆಯುರಿ ಉಂಟಾಗುತ್ತದೆ. ಏಕೆಂದರೆ ಇದು ಪ್ರೋಟೀನ್-ಬ್ರೇಕಿಂಗ್ ಕಿಣ್ವ ಪೆಪ್ಸಿನ್ ಅನ್ನು ಸಕ್ರಿಯಗೊಳಿಸುತ್ತದೆ. ನಿಂಬೆರಸದ ಅತಿಯಾದ ಸೇವನೆಯಿಂದಾಗಿ ಪೆಪ್ಟಿಕ್ ಅಲ್ಸರ್‌ ಉಲ್ಬಣಿಸಬಹುದು.

ನಿಂಬೆ ನೀರು ಡಿಹೈಡ್ರೇಶನ್‌ಗೂ ಕಾರಣವಾಗಬಹುದು. ನಿಂಬೆ ನೀರನ್ನು ಸೇವಿಸಿದಾಗ ಅದು ಮೂತ್ರದ ಮೂಲಕ ದೇಹವನ್ನು ನಿರ್ವಿಷಗೊಳಿಸುತ್ತದೆ. ಈ ಪ್ರಕ್ರಿಯೆಯಲ್ಲಿ, ಅನೇಕ ಎಲೆಕ್ಟ್ರೋಲೈಟ್‌ಗಳು ಮತ್ತು ಸೋಡಿಯಂನಂತಹ ಅಂಶಗಳು ಮೂತ್ರದ ಮೂಲಕ ಹೊರಹಾಕಲ್ಪಡುತ್ತವೆ. ಇದರಿಂದ ನಿರ್ಜಲೀಕರಣ ಉಂಟಾಗಬಹುದು. ಅಷ್ಟೇ ಅಲ್ಲ ಪೊಟ್ಯಾಸಿಯಮ್ ಕೊರತೆಗೆ ಸಹ ಇದು ಕಾರಣವಾಗಬಹುದು.

ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ರಕ್ತದಲ್ಲಿನ ಕಬ್ಬಿಣದ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಅಪಾಯಕಾರಿ ಬೆಳವಣಿಗೆ. ನಮ್ಮ ಆಂತರಿಕ ಅಂಗಗಳು ಇದರಿಂದ ಹಾನಿಗೊಳಗಾಗಬಹುದು.

ನಿಂಬೆಯಲ್ಲಿ ಸಿಟ್ರಿಕ್ ಆಮ್ಲವಿದೆ. ಇದು ಸಾಕಷ್ಟು ಪ್ರಮಾಣದಲ್ಲಿ ಆಕ್ಸಲೇಟ್ ಅನ್ನು ಹೊಂದಿರುತ್ತದೆ. ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಹರಳುಗಳ ರೂಪದಲ್ಲಿ ದೇಹದಲ್ಲಿ ಸಂಗ್ರಹವಾಗುತ್ತದೆ, ಇದು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸುತ್ತದೆ.

ಹೆಚ್ಚು ನಿಂಬೆ ನೀರು ಕುಡಿಯುವುದರಿಂದ ಮೂಳೆಗಳು ದುರ್ಬಲಗೊಳ್ಳುತ್ತವೆ. ನಿಂಬೆ ಆಮ್ಲೀಯತೆಯನ್ನು ಹೊಂದಿರುತ್ತದೆ, ಇದು ಮೂಳೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ನಿಂಬೆ ನೀರನ್ನು ಅತಿಯಾಗಿ ಸೇವಿಸುವುದರಿಂದ ಅಸಿಡಿಟಿ ಸಮಸ್ಯೆ ಉಂಟಾಗುತ್ತದೆ. ನಿಂಬೆಯಲ್ಲಿ ಹೆಚ್ಚಿನ ಪ್ರಮಾಣದ ಆಮ್ಲವಿದೆ. ಇದರ ಸೇವನೆಯಿಂದ ದೇಹದಲ್ಲಿ ಆಮ್ಲದ ಪ್ರಮಾಣ ಹೆಚ್ಚಾಗುತ್ತದೆ.

ಟಾನ್ಸಿಲ್ ಸಮಸ್ಯೆ ಇರುವವರು ನಿಂಬೆರಸ ಬೆರೆಸಿದ ನೀರನ್ನು ಸೇವಿಸಬೇಡಿ. ನಿಂಬೆ ನೀರನ್ನು ಅತಿಯಾಗಿ ಸೇವಿಸಿದರೆ ಅದು ಗಂಟಲು ನೋವಿಗೆ ಕಾರಣವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...