ನವದೆಹಲಿ: ಪಾಕಿಸ್ತಾನ ಸೇನೆ ಭಾರತದ ಮೇಲೆ ಅಪ್ರಚೋದಿತ ದಾಳಿ ನಡೆಸುತ್ತಿದ್ದು, ಅದಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಪಾಕಿಸ್ತಾನದ ವಾಯುನೆಲೆಗಳ್ನನು ಭಾರತ ಧ್ವಂಸಗೊಳಿಸಿದೆ ಎಂದು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವ್ಯೋಮಿಕಾ ಸಿಂಗ್ , ಪಾಕಿಸ್ತಾನದ 5 ಏರ್ ಬೇಸ್ ಗಳು, 2 ರಾಡರ್ ಬೇಸ್ ಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿದೆ. ಪಾಕಿಸ್ತಾನದ ಸೇನಾ ಸೆಂಟರ್ ಮೇಲೂ ಭಾರತ ದಾಳಿ ನಡೆಸಿದೆ ಎಂದು ವಿವರಿಸಿದ್ದಾರೆ.
ರಫೀಕ್ ಶೋರ್ಕೋಟ್, ಮುರಿದ್ ಚಕ್ವಾಲ್, ನೂರ್ ಖಾನ್, ರಾವಲ್ಪಿಂಡಿ, ಸಿಯಾಲ್ಕೋಟ್ ವಾಯುನೆಲೆ ಧ್ವಂಸಗೊಳಿಸಲಾಗಿದೆ
ಇದೇ ವೇಳೆ ಪಾಕಿಸ್ತಾನದ ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿವೆ. ಭಾರತದ ಏರ್ ಬೇಸ್ ಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಸುಳ್ಳು ಹೇಳಿವೆ. ಆದರೆ ಭಾರತದ ಎಲ್ಲಾ ಏರ್ ಬೇಸ್ ಗಳು ಸುರಕ್ಷಿತವಾಗಿವೆ. ಪಾಕಿಸ್ತಾನದ ಎಲ್ಲಾ ದಾಳಿಗಳನ್ನು ಭಾರತ ವಿಫಲಗೊಳಿಸುತ್ತಿದೆ ಎಂದು ತಿಳಿಸಿದ್ದಾರೆ.