ಡಿ.ಕೆ. ಶಿವಕುಮಾರ್ ಬಂಡೆಯಾದ್ರೆ ನಾನು ನಂದಿ ಬೆಟ್ಟ: ಕೆ. ಸುಧಾಕರ್

ಚಿಕ್ಕಬಳ್ಳಾಪುರ: ಡಿಸಿಎಂ ಡಿ.ಕೆ. ಶಿವಕುಮಾರ್ ಕನಕಪುರ ಬಂಡೆಯಾದರೆ ನಾನು ನಂದಿ ಬೆಟ್ಟ ಎಂದು ಡಿಸಿಎಂ ಡಿ.ಕೆ. ವಿರುದ್ಧ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ

ಬಂಡೆಯೊಂದಿಗೆ ಗುದ್ದಾಡಿ ಮೆಡಿಕಲ್ ಕಾಲೇಜನ್ನು ನಾನು ತಂದೆ. ಚಿಕ್ಕಬಳ್ಳಾಪುರಕ್ಕೆ ಹಾಲು ಒಕ್ಕೂಟ ತಂದಿದ್ದೆ. ಆದರೆ ಹಾಲು ಒಕ್ಕೂಟವನ್ನು ಕಾಂಗ್ರೆಸ್ ನವರು ರದ್ದು ಮಾಡಿದ್ದಾರೆ. ಸಂಸದನಾದರೆ ಮತ್ತೆ ಚಿಕ್ಕಬಳ್ಳಾಪುರಕ್ಕೆ ಹಾಲು ಒಕ್ಕೂಟ ತರುತ್ತೇನೆ ಎಂದು ಹೇಳಿದ್ದಾರೆ.

ಹೆಣ್ಣು ಮಕ್ಕಳ ಬಗ್ಗೆ ಕುಮಾರಸ್ವಾಮಿ ಏನೋ ಹೇಳಿದ್ದಾರಂತೆ. ಹೆಣ್ಣು ಮಕ್ಕಳಿಗೋಸ್ಕರ ಸಾರಾಯಿ ರದ್ದು ಮಾಡಿದ್ದು ಕುಮಾರಸ್ವಾಮಿ. ಅವರ ಜೊತೆ ನನ್ನನ್ನು ಲೋಕಸಭೆಗೆ ಕಳುಹಿಸಲು ದೇವರು ನಿಶ್ಚಯಿಸಿದ್ದಾನೆ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಕೆ. ಸುಧಾಕರ್ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read